Friday, April 18, 2025
Google search engine

Homeಸ್ಥಳೀಯಬುಡಕಟ್ಟು ಸಮುದಾಯದ ಯುವ ಜನತೆ ಪ್ರಜ್ಞಾವಂತರಾಗಿ ಮುನ್ನಲೆಗೆ ಬನ್ನಿ: ಶಾಸಕ ಜಿ.ಟಿ.ದೇವೇಗೌಡ

ಬುಡಕಟ್ಟು ಸಮುದಾಯದ ಯುವ ಜನತೆ ಪ್ರಜ್ಞಾವಂತರಾಗಿ ಮುನ್ನಲೆಗೆ ಬನ್ನಿ: ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಬಹಳ ಹಿನ್ನೆಲೆಯಲ್ಲಿ ಉಳಿದಿರುವ ಬುಡಕಟ್ಟು ಸಮುದಾಯದ ಯುವ ಜನತೆ ಪ್ರಜ್ಞಾವಂತರಾಗಿ ಶಿಕ್ಷಣ ಪಡೆದು ಸಮಾಜದ ಮುನ್ನಲೆಗೆ ಬನ್ನಿ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಭಾರತ ಸರ್ಕಾರ ಯುವಜನ ಹಾಗೂ ಕ್ರೀಡಾ ಸಚಿವಾಲಯ, ಕೇಂದ್ರ ಗೃಹ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 15 ನೇ ಬುಡಕಟ್ಟು ವಿನಿಮಯ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗ ಬುಡಕಟ್ಟು ಸಮುದಾಯದವರಿಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದೇವೆ. ಸಮುದಾಯ ಸಾಂಸ್ಕೃತಿಕವಾಗಿ ಹೆಚ್ಚು ಸಂಪದ್ಭರಿತವಾಗಿದೆ. ಆದರೆ, ಶಿಕ್ಷಣ ಹಾಗೂ ಸಮಾಜದ ಮುನ್ನಲೆಯಲ್ಲಿ ತೀರ ಹಿಂದುಳಿದಿದ್ದಾರೆ. ಹೀಗಾಗಿ ಸಮುದಾಯದ ಯುವ ಜನರು ಹೆಚ್ಚು ಶಿಕ್ಷಣ ಪಡೆಯಬೇಕಿದೆ‌. ಈ ನಿಟ್ಟಿನಲ್ಲಿ ನಿಮ್ಮ ಸಂಸ್ಕೃತಿ ಉಳಿಸಿಕೊಂಡು ಶಿಕ್ಷಿತರಾಗಿ ಎಂದು ಸಲಹೆ ನೀಡಿದರು.

ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ಎಂ.ಎನ್.ನಟರಾಜ್ , ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೋಮಣ್ಣ. ಅಭಿಷೇಕ್ ಚವರೆ ಗಿರಿಜನ ಹಾಡಿಯ ಶ್ರೀಕಾಂತ್, ಎಂ.ಪಿ.ವರ್ಷ ಚಿನ್ನಗಿರಿಗೌಡ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular