Thursday, April 23, 2026
Google search engine

Homeಅಪರಾಧಕಾನೂನುಜಿ.ಪರಮೇಶ್ವರ್ ಬೆಟ್ಟಿಂಗ್ ಹೇಳಿಕೆ ಕೇಸ್‌ಗೆ ಹೈಕೋರ್ಟ್ ತಡೆ, ವಿಚಾರಣೆ ಮುಂದೂಡಿಕೆ

ಜಿ.ಪರಮೇಶ್ವರ್ ಬೆಟ್ಟಿಂಗ್ ಹೇಳಿಕೆ ಕೇಸ್‌ಗೆ ಹೈಕೋರ್ಟ್ ತಡೆ, ವಿಚಾರಣೆ ಮುಂದೂಡಿಕೆ

ಬೆಂಗಳೂರು : ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ದದ ಬೆಟ್ಟಿಂಗ್ ಹೇಳಿಕೆ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ತಮ್ಮ ವಿರುದ್ದ ದಾಖಲಾಗಿರುವ ಬೆಟ್ಟಿಂಗ್ ಹೇಳಿಕೆ ಕುರಿತ ಪ್ರಕರಣವನ್ನು ರದ್ದು ಕೋರಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ  ಹೈಕೋರ್ಟ್ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಪೀಠ ಪ್ರಕರಣಕ್ಕೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿಕೆ ಮಾಡಿದೆ.

ವಿಚಾರಣೆ ವೇಳೆ  ತಮಾಷೆಗೆ ಮಾತನಾಡಿದರೂ ಕೇಸ್ ದಾಖಲಿಸಬಹುದೇ? ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆ ನೀಡಿದಂತೆ ಕಾಣುತ್ತಿಲ್ಲ. ಕೋರ್ಟ್  ತನಿಖೆಗೆ ಆದೇಶಿಸುವ ಮುನ್ನ ಪೊಲೀಸರಿಂದ ವಿವರಣೆ ಪಡೆಯಬಹುದಿತ್ತು ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಬಡ್ಡಿ ಆಟದಲ್ಲಿ 500 ರೂ. ಬೆಟ್ಟಿಂಗ್ ಕಟ್ಟಿದ್ದಾಗಿ ಹೇಳಿಕೆ ನೀಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ದ ಹೆಚ್ ಆರ್ ನಾಗಭೂಷಣ್ ಎಂಬುವವರು ದೂರು ದಾಖಲಿಸಿದ್ದರು.

RELATED ARTICLES
- Advertisment -
Google search engine

Most Popular