Saturday, May 2, 2026
Google search engine

Homeರಾಜ್ಯಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಗ್ಯಾಸ್ ದರ ಏರಿಕೆ : ಸಮಸ್ಯೆ ಪರಿಹಾರದ ಬಳಿಕ ದರ ಕಡಿಮೆ...

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಗ್ಯಾಸ್ ದರ ಏರಿಕೆ : ಸಮಸ್ಯೆ ಪರಿಹಾರದ ಬಳಿಕ ದರ ಕಡಿಮೆ : ಪ್ರಹ್ಲಾದ್ ಜೋಶಿ

ದಾವಣಗೆರೆ :  ಮಧ್ಯಪ್ರಾಚ್ಯದಲ್ಲಿ ಯುದ್ದ, ಹೋರ್ಮಜ್ ಜಲಸಂಧಿ ಬಿಕ್ಕಟ್ಟಿನಿಂದ ಗ್ಯಾಸ್ ಸಿಲಿಂಡರ್ ಪೂರೈಕೆ ವ್ಯತ್ಯಯದಿಂದ ಸಮಸ್ಯೆಯಾಗಿದೆ.  ಸಮಸ್ಯೆ ಬಗೆಹರಿದ ನಂತರ ಗ್ಯಾಸ್ ಸಿಲಿಂಡರ್ ದರ ಕಡಿಮೆಯಾಗುತ್ತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಂಪನಿಗಳು ಗ್ಯಾಸ್ ಸಿಲಿಂಡರ್ ದರ ಏರಿಸಿವೆ  ಯುಪಿಎ ಅವಧಿಯಲ್ಲಿ ಕಂಪನಿಗಳಿಗೆ ದರ ಏರಿಸುವ ಅವಕಾಶವಿತ್ತು.  ಹೀಗಾಗಿ ಅಯಾ ಕಂಪನಿಗಳು ಗ್ಯಾಸ್ ಸಿಲಿಂಡರ್ ದರ ಏರಿಸಿವೆ. ಜಾಗತಿಕ ಸ್ಥಿತಿಗತಿಗಳ ಬೆಳವಣಿಗೆ ಇದಕ್ಕೆ ಕಾರಾಣವಾಗುತ್ತದೆ.  ಪಾಕ್ ಸೇರಿ ಕೆಲ ದೇಶಗಳಲ್ಲಿ ಗ್ಯಾಸ್ ಪೆಟ್ರೋಲ್ ಸಿಗುತ್ತಿಲ್ಲ.  ಆದರೆ ಭಾರತದಲ್ಲಿ ಎಲ್ಪಿಜಿ, ಪೆಟ್ರೋಲ್ ನಿರಂತರವಾಗಿ ಸಿಗುತ್ತಿದೆ ಎಂದರು.

ಇದೇ ವೇಳೆ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಗೊಂದಲ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಕುರ್ಚಿ ಕದನದಲ್ಲಿ ಖರ್ಗೆ ಹೆಸರು ತಂದು ಗೊಂದಲ ಸೃಷ್ಠಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ರನ್ನು ಸಿಎಂ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎಂಬ ಚರ್ಚೆ ಇದೆ.  ಹಾಗಾಗಿ ಖರ್ಗೆ,  ಪರಮೇಶ್ವರ್ ಹೆಸರು ತರುತ್ತಿದ್ದಾರೆ ಎಂದು ಲೇವಡಿ ಮಾಡಿದರು.

RELATED ARTICLES
- Advertisment -
Google search engine

Most Popular