ಹೈದರಾಬಾದ್: ಬಿಸಿಲಿನ ಬೇಗೆ ಹೆಚ್ಚಾಗುತ್ತಿರುವ ಕಾರಣ ಎಲ್ಲರ ಮನೆಯಲ್ಲೂ ಕೂಲರ್ಗಳನ್ನ ಅವಲಂಭಿಸುವುದು ಸಾಮನ್ಯ ಆದರೆ, ಈ ಕೂಲರ್ ಬಳಸುವಾಗ ವ್ಯಕ್ತಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ನಗರದ ಎಎಸ್ ರಾವ್ ನಗರದಲ್ಲಿ ಆನ್ ಆಗಿದ್ದ ಏರ್ ಕೂಲರ್ಗೆ ನೀರು ತುಂಬಿಸಲು ಹೋದ 54 ವರ್ಷದ ಕೃಷ್ಣ ಎಂಬ ವ್ಯಕ್ತಿ ವಿದ್ಯುತ್ ಶಾಕ್ ತಗುಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೂಲರ್ ಆನ್ ಇರುವಾಗಲೇ ನೀರು ಹಾಕಲು ಯತ್ನಿಸಿದಾಗ ಈ ದುರಂತ ಸಂಭವಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನಗರದ ಎಎಸ್ ರಾವ್ ನಗರ ವ್ಯಾಪ್ತಿಯಲ್ಲಿ ಇದೇ ತಿಂಗಳ ಮೇ 14 ತನ್ನ ಮನೆಯಲ್ಲಿದ್ದ ಏರ್ ಕೂಲರ್ಗೆ ನೀರು ತುಂಬಿಸುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಕೃಷ್ಣ (54) ಎಂಬ ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿದ್ದಾರೆ.



