Monday, April 21, 2025
Google search engine

Homeರಾಜ್ಯಶಾಲಾ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತ: ಶಿಕ್ಷಕ ಸಾವು

ಶಾಲಾ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತ: ಶಿಕ್ಷಕ ಸಾವು

ಭರಮಸಾಗರ: ಶಾಲಾ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತವಾಗಿ ಶಿಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ತಾಲೂಕಿನ ವಡ್ಡರಸಿದ್ದವನಹಳ್ಳಿ ಗ್ರಾಮದಲ್ಲಿ ಡಿ.15ರ ಶುಕ್ರವಾರ ನಡೆದಿದೆ.

ಚಿತ್ರದುರ್ಗ ತಾಲೂಕಿನ ಕೊಡಗಹಳ್ಳಿ ಮೂಲದ ಜೆ.ಬಸವರಾಜಪ್ಪ (60) ಮೃತ ಶಿಕ್ಷಕರು.

ಶಿಕ್ಷಕರು ಶಾಲಾ ಕರ್ತವ್ಯ ನಿರ್ವಹಣೆ ವೇಳೆ ಕುಸಿದು ಬಿದ್ದಿದ್ದಾರೆ. ಅವರ ಆರೋಗ್ಯ ಏರುಪೇರು ಗಮನಿಸಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಜೆ.ಬಸವರಾಜಪ್ಪ ಅವರು ಇದೇ ಡಿಸೆಂಬರ್ 31ಕ್ಕೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಬೇಕಿತ್ತು. ಚಿತ್ರದುರ್ಗ ನಗರದ ಗಾರೇಹಟ್ಟಿಯಲ್ಲಿ ವಾಸವಾಗಿದ್ದರು.

RELATED ARTICLES
- Advertisment -
Google search engine

Most Popular