Sunday, April 20, 2025
Google search engine

Homeರಾಜ್ಯಸುದ್ದಿಜಾಲಮಾ.16 ರಿಂದ 28 ರವರೆಗೆ ಶ್ರೀ ವೈರಮುಡಿ ಬ್ರಹ್ಮೋತ್ಸವ

ಮಾ.16 ರಿಂದ 28 ರವರೆಗೆ ಶ್ರೀ ವೈರಮುಡಿ ಬ್ರಹ್ಮೋತ್ಸವ

ಮಂಡ್ಯ: ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ೨೦೨೪ ರ ಶ್ರೀ ವೈರಮುಡಿ ಬ್ರಹ್ಮೋತ್ಸವವನ್ನು ಮಾ.೧೬ ರಿಂದ ೨೮ ರವರೆಗೆ ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಾ.೧೬ ರಂದು ಶ್ರೀವೈರಮುಡಿ ಬ್ರಹ್ಮೋತ್ಸವಕ್ಕೆ ಅಂಕುರಾರ್ಪಣ, ಮೃತ್ತಿಕಾ ಸಂಗ್ರಹಣ, ಮಾ.೧೭ರಂದು ಕಲ್ಯಾಣೋತ್ಸವ ಧಾರಾಮಹೋತ್ಸವ- ಅದಿವಾಸರ- ರಕ್ಷಾಬಂಧನ- ಧ್ವಜಪ್ರತಿಷ್ಠೆ, ಮಾ.೧೮ ರಂದು ೧ ನೇ ತಿರುನಾಳ್- ಧ್ವಜಾರೋಹಣ, ಶ್ರೀ ರಾಮಾನುಜಾಚಾರ್ಯರಿಗೆ ಅಭಿಷೇಕ, ಭೇರೀತಾಡನ- ತಿರುಪ್ಪರೈ -ಹಂಸವಾಹನ- ಯಾಗಶಾಲಾಪ್ರವೇಶ, ಮಾ.೧೯ ರಂದು ೨ ನೇ ತಿರುನಾಳ್ ಶೇಷವಾಹನ ಪಡೆಯೇತ್ತ, ಮಾ.೨೦ ರಂದು ೩ ನೇ ತಿರುನಾಳ್- ನಾಗವಲ್ಲೀಮಹೋತ್ಸವ- ನರಂಧೋಳಿಕಾರೋಹಣ- ಚಂದ್ರಮಂಡಲವಾಹನ- ಪಡಿಯೇತ್ತ, ಮಾ.೨೧ ರಂದು ೪ ನೇ ತಿರುನಾಳ್ ಶ್ರೀ ವೈರಮುಡಿ ಕಿರೀಟಧಾರಣ ಮಹೋತ್ಸವ( ರಾತ್ರಿ ೮.೩೦ ರಿಂದ ಮುಂಜಾನೆ ೪.೦೦ ಗಂಟೆಯ ವರೆಗೆ) ಪಡಿಯೇತ್ತ, ಮಾ.೨೨ ರಂದು ೫ ನೇ ತಿರುನಾಳ್- ಪ್ರಹ್ಲಾದ ಪರಿಪಾಲನ- ಗರುಡವಾಹನ- ವಿಶೇಷ ಪಡಿಯೇತ್ತ, ಮಾ.೨೩ ರಂದು ೬ ನೇ ತಿರುನಾಳ್ – ಗಜೇಂದ್ರ ಮೋಕ್ಷ -ಆನೆವಸಂತ – ಕುದುರೆವಾಹನ- ಆನೆವಾಹನ -ವಿಶೇಷ ಪಡಿಯೇತ್ತ, ಮಾ.೨೪ ರಂದು ೭ನೇ ತಿರುನಾಳ್- ಶ್ರೀ ಮನ್ಮಹಾರೋಥೋತ್ಸವ, ಯಾತ್ರಾದಾನ, ರಥೋತ್ಸವ, ಶ್ರೀ ಚೆಲುವನಾರಾಯಣಸ್ವಾಮಿ ಮತ್ತು ಶ್ರೀ ರಾಮಾನುಜರಿಗೆ ಅಭಿಷೇಕ ಅಮ್ಮನವರ ಸನ್ನಿಧಿಯಲ್ಲಿ, ಬಂಗಾರ ಪಲ್ಲಕ್ಕಿ ಉತ್ಸವ, ಮಾ.೨೫ ರಂದು ೮ನೇ ತಿರುನಾಳ್- ಪಂಗುನ್ಯುತ್ತರಂ, ತೆಪ್ಪೋತ್ಸವ- ಡೋಲೋತ್ಸವ- ಕುದುರೆ ವಾಹನ- ಕಳ್ಳರಸುಲಿಗೆ, ಮಾ.೨೬ ರಂದು ೯ನೇ ತಿರುನಾಳ್- ಶ್ರೀ ನಾರಾಯಣಸ್ವಾಮಿ ಜಯಂತಿ, ಸಂಧಾನಸೇವೆ -ಚೂರ್ಣಅಭಿಷೇಕ- ಅವಬೃಥ – ಪಟ್ಟಾಭಿಷೇಕ -ಪುಷ್ಪಮಂಟಪರೋಹಣ (ಸಮರಭೂಪಾಲವಾಹನ)- ಪಡಿಮಾಲೆ – ಪೂರ್ಣಾಹುತಿ, ಶಾತ್ತುಮೊರೈ, ಕುಂಭಪ್ರೋಕ್ಷಣೆ, ಮಾ.೨೭ ರಂದು ೧೦ ನೇ ತಿರುನಾಳ್ -ಶ್ರೀ ನಾರಾಯಣಸ್ವಾಮಿಗೆ ಮಹಾಭಿಷೇಕ -ಪುಷ್ಪಯಾಗ- ಕತ್ತಲುಪ್ರದಕ್ಷಣೆ- ಹನುಮಂತವಾಹನ- ಉದ್ವಾಸನಪ್ರಬಂಧ, ಮಾ.೨೮ ರಂದು ಶ್ರೀ ಅಮ್ಮನವರಿಗೆ ಮತ್ತು ಶ್ರೀಯೋಗಾನರಸಿಂಹಸ್ವಾಮಿಗೆ ಮಹಾಭಿಷೇಕ- ಶೇರ್ತಿಸೇವೆ -ಕೊಡೈತಿರುನಾಳ್ ಉತ್ಸವ ಪ್ರಾರಂಭವಾಗುವುದು.

RELATED ARTICLES
- Advertisment -
Google search engine

Most Popular