Tuesday, April 22, 2025
Google search engine

Homeಅಪರಾಧವಿಜಯಪುರ: ಅನೈತಿಕ ಸಂಬಂಧ ಹಿನ್ನೆಲೆ ಜೋಡಿ ಹತ್ಯೆ

ವಿಜಯಪುರ: ಅನೈತಿಕ ಸಂಬಂಧ ಹಿನ್ನೆಲೆ ಜೋಡಿ ಹತ್ಯೆ

ವಿಜಯಪುರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಜೋಡಿ ಹತ್ಯೆಯಾಗಿರುವ ದುರಂತ ಜಿಲ್ಲೆಯಲ್ಲಿ ಸಂಭವಿಸಿದೆ.

ಜಿಲ್ಲೆಯ ನಿಡಗುಂದಿ ತಾಲೂಕಿನ ಮಾರಡಗಿ ತಾಂಡಾ ಬಳಿ ಗಣಿ ಗ್ರಾಮದ 35 ವರ್ಷದ ಕಲ್ಲಪ್ಪ ಕುಂಬಾರ ಹಾಗೂ 38 ವರ್ಷದ ಪಾರ್ವತಿ ತಳವಾರ ಹತ್ಯೆ ಮಾಡಲಾಗಿದೆ.

ಮಾರಡಗಿ ತಾಂಡಾ ಬಳಿಯ ಜಮೀನಿನಲ್ಲಿ ಕಲ್ಲಪ್ಪ ಹಾಗೂ ಪಾರ್ವತಿ ಇಬ್ಬರು ಜೊತೆಯಾಗಿ ಇರುವುದನ್ನು ಕಂಡಿರುವ ಪಾರ್ವತಿ ಮನೆಯವರು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಹತ್ಯೆಯ ಬಳಿಕ ಶವಗಳ ಮೇಲೆ ಮುಳ್ಳುಕಂಟಿಯನ್ನು ಹಾಕಲಾಗಿದೆ.

ಸುದ್ದಿ ತಿಳಿಯುತ್ತಲೇ ಸಿಪಿಐ ಶರಣಗೌಡ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ನಿಡಗುಂದಿ ಠಾಣೆ ಪೊಲೀಸರು, ತನಿಖೆ ನಡೆಸಿದ್ದು, ತಲೆ ಮರೆಸಿಕೊಂಡಿರುವ ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

RELATED ARTICLES
- Advertisment -
Google search engine

Most Popular