Sunday, April 20, 2025
Google search engine

Homeರಾಜ್ಯಸುದ್ದಿಜಾಲಸಮಾಜದ ಏಳಿಗೆಗೆ ನಿರಂತರ ಶ್ರಮಿಸುತ್ತಿರುವ ಮಠಗಳು: ಶ್ರೀ ನಾಗಭೂಷಣ ಸ್ವಾಮಿ

ಸಮಾಜದ ಏಳಿಗೆಗೆ ನಿರಂತರ ಶ್ರಮಿಸುತ್ತಿರುವ ಮಠಗಳು: ಶ್ರೀ ನಾಗಭೂಷಣ ಸ್ವಾಮಿ

ಮೈಸೂರು: ಸಮಾಜದ ಏಳಿಗೆಗಾಗಿ ಮಠಗಳುತ್ರಿವಿಧದಾಸೋಹದ ಮೂಲಕ ನಿರಂತರವಾಗಿ ಶ್ರಮಿಸುತ್ತಿವೆಎಂದು ಶ್ರೀ ಸುತ್ತೂರು ಮಠದ ಪರಮಪೂಜ್ಯಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ನಂಜನಗೂಡುತಾಲ್ಲೂಕು ಸೂರಹಳ್ಳಿ ಶ್ರೀ ವಿರಕ್ತಮಠದ ನಾಗಭೂಷಣ ಸ್ವಾಮಿಗಳವರ ಪುಣ್ಯಾರಾಧನೆಯ ನಿಮಿತ್ತ ಏರ್ಪಡಿಸಿದ್ದಧಾರ್ಮಿಕ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ ತಿಳಿಸಿದರು.

ಮಠಗಳು ಮತ್ತು ಸಮಾಜಒಂದಕ್ಕೊಂದು ಪೂರಕವಾದವು.ಯಾವುದೇ ಬೇಧ-ಭಾವಗಳಿಲ್ಲದೆ ಎಲ್ಲರಿಗೂ ಮಠಗಳು ಸೇವೆಯನ್ನು ಸಲ್ಲಿಸುತ್ತಿವೆ. ನಾಗಭೂಷಣ ಸ್ವಾಮಿಗಳು ಪೂಜಾ ನಿಷ್ಠರಾಗಿದ್ದರು.ಆಧ್ಯಾತ್ಮಿಕ ಚಿಂತನೆಗಳಲ್ಲಿ ಅತೀವ ಒಲವುಳ್ಳವರಾಗಿದ್ದರು.ಅವರ ಉತ್ತರಾಧಿಕಾರಿಗಳಾಗಿರುವ ಶ್ರೀ ಕೆಂಡಗಣ್ಣ ಸ್ವಾಮಿಗಳು ಕ್ರಿಯಾಶೀಲರು. ಜೆಎಸ್‌ಎಸ್‌ಗುರುಕುಲದಲ್ಲಿದ್ದಕೊಂಡುಅಧ್ಯಯನ ಮಾಡುತ್ತಿದ್ದಾರೆ. ಅವರ ಹಿರಿಯ ಶ್ರೀಗಳಂತೆ ಮಠದಎಲ್ಲ ಕಾರ್ಯಗಳನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲೆಂದು ತಿಳಿಸಿದರು.

ದೇವನೂರು ಶ್ರೀ ಮಹಾಂತ ಸ್ವಾಮಿಗಳು ಸೂರಹಳ್ಳಿ ಶ್ರೀಗಳು ಸರಿಯಾದ ಮಾರ್ಗದಲ್ಲಿ ನಡೆದವರು.ಸಮಾಜದ ಬಗ್ಗೆ ಅತೀವವಾದ ನಿಷ್ಠೆಯನ್ನು ಹೊಂದಿದ್ದವರು.ದಾಸೋಹದಲ್ಲೇ ಭಗವಂತನನ್ನುಕಂಡವರುಎಂದರು.ಹುಲ್ಲಹಳ್ಳಿ ಶ್ರೀ ವಿರಕ್ತಮಠದ ಶ್ರೀ ಇಮ್ಮಡಿಚನ್ನಮಲ್ಲ ದೇಶಿಕೇಂದ್ರ ಸ್ವಾಮಿಗಳು ಸೂರಹಳ್ಳಿ ಶ್ರೀಗಳು ಮೃದು ಸ್ವಭಾವದ ವ್ಯಕ್ತಿತ್ವವನ್ನು ಹೊಂದಿದ್ದವರು.ನಮ್ಮಹಿರಿಯ ಗುರುಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರೆಂದು ತಿಳಿಸಿದರು.ಗೌಡಹಳ್ಳಿ ಶ್ರೀ ಮರಿತೋಂಟದಾರ್ಯ ಸೂರಹಳ್ಳಿ ಶ್ರೀಗಳು ಗಟ್ಟಿತನದ ವ್ಯಕ್ತಿತ್ವ ಹೊಂದಿದ್ದ ಸ್ವಾಭಿಮಾನಿಗಳು.ಏನೇ ಕಷ್ಟ-ನಷ್ಟಗಳಾದರೂ ಸಮಭಾವದಿಂದ ಸ್ವೀಕರಿಸಿ ಶ್ರೀಮಠವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರುಎಂದರು.ಶಿರಮಳ್ಳಿ ಶ್ರೀ ಮುರಘೀ ಸ್ವಾಮಿ ಮಠದ ಶ್ರೀ ಇಮ್ಮಡಿ ಮುರಘೀ ಸ್ವಾಮಿಗಳು ಗುರುವು ಸನ್ಮಾರ್ಗದಲ್ಲಿ ನಡೆಯಲುದಾರಿತೋರುವ ಪರುಷ ಮಣಿಇದ್ದಂತೆ.ಗುರುವಿನ ಗುಲಾಮನಾಗುವ ತನಕದೊರೆಯದಣ್ಣ ಮುಕುತಿ ಎಂಬ ನುಡಿಯಂತೆಗುರುವಿಗೆ ಶರಣಾದರೆಉತ್ತಮ ಮಾರ್ಗದೊರೆಯುತ್ತದೆಎಂದು ಹೇಳಿದರು.ಕಂತೆ ಮಾದಪ್ಪನ ಬೆಟ್ಟದ ಶ್ರೀಗಳು ಶ್ರೀಗಳನ್ನು ಸ್ಮರಿಸಿದರು.

ಕಿರಿಯ ಶ್ರೀಗಳಾದ ಶ್ರೀ ಕೆಂಡಗಣ್ಣ ಸ್ವಾಮಿಗಳು ನಮ್ಮ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇನೆ. ಮಠದಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಲಹೆ ಮತ್ತು ಸಹಕಾರಅಗತ್ಯ ಎಂದರು. ಕಸುವಿನಹಳ್ಳಿಯ ಶಿವಮೂರ್ತಿ,ರಾಂಪುರದ ಪಟೇಲ್ ಮಹದೇವಪ್ಪ,ಸೂರಹಳ್ಳಿ ಕೆಂಪರಾಜು, ಸೂರಹಳ್ಳಿ ವೀರಭದ್ರಸ್ವಾಮಿ, ರಮೇಶ್, ಚುಂಚನಹಳ್ಳಿ ಶ್ರೀಮತಿ ಮಂಗಳ ಮಹದೇವಪ್ಪ, ಬೆಟ್ಟದಮಾದಹಳ್ಳಿ ಪ್ರಭುಸ್ವಾಮಿ, ಲಕ್ಷಣಾಪುರ ಚಿನ್ನಸ್ವಾಮಪ್ಪ, ಬಿಳುಗಲಿ ಗೀತಾ ಶಿವಪ್ಪದೇವರುಗಳು ಮಾತನಾಡಿಶ್ರೀಗಳು ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದರು. ಈ ಭಾಗದ ಭಕ್ತರನ್ನು ಜಾಗೃತಗೊಳಿಸುವ ಕಾಯಕದಲ್ಲಿ ನಿರತರಾಗಿದ್ದರು.ಕಿರಿಯ ಶ್ರೀಗಳಿಗೂ ಮಠವನ್ನುಉತ್ತಮವಾಗಿ ಮುನ್ನಡೆಸಿಕೊಂಡು ಹೋಗಲು ನಾವೆಲ್ಲರೂ ಸಹಕಾರ ನಿಡುತ್ತೇವೆ. ಶ್ರೀಗಳು ಸದಾ ಭಕ್ತರ ಬಗ್ಗೆ ಯೋಚಿಸುತ್ತಿದ್ದರು.ಮಠವನ್ನು ಶಕ್ತಿಮೀರಿ ಬೆಳೆಸಿದ್ದಾರೆ.ಇದನ್ನು ಮುಂದುವರೆಸಿಕೊಂಡು ಹೋಗಬೇಕಾದಜವಾಬ್ದಾರಿ ನಮ್ಮೆಲ್ಲರ ಮೇಲಿದೆಎಂದು ಹೇಳಿದರು.
ಚಿಕ್ಕತುಪ್ಪೂರು ಶ್ರೀಗಳು ಪ್ರಾರ್ಥಿಸಿ, ಸ್ವಾಗತಿಸಿದರು. ಶಿರಮಳ್ಳಿ ಶ್ರೀಗಳು ವಂದಿಸಿದರು. ಚುಂಚನಹಳ್ಳಿ ಶ್ರೀಗಳು ಶ್ರೀಗಳ ವ್ಯಕ್ತಿತ್ವದಗುಣಗಾನ ಮಾಡಿದರು ಹಾಗೂ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular