ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚನ್ನಂಗೆರೆ ಗ್ರಾಮದಲ್ಲಿ ಓಕಳಿ ಹಬ್ಬ ಮತ್ತು ಶ್ರೀ ಕೊಳ್ಳಿ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವವನ್ನು ಆಯೋಜಿಸಲಾಗಿದೆ.
ಏ 20 ರ ಭಾನುವಾರ ನೀರಿನ ಓಕಳಿ, 21ರಂದು ಹುಲಿವೇಷ ದೊಂದಿಗೆ ರಂಗಮಂಟಪಕ್ಕೆ ಅಭಿಷೇಕ ನಡೆಯಲಿದ್ದು, 22 ರ ಮಂಗಳವಾರ ಮಧ್ಯಾನ 1 ಗಂಟೆಗೆ ರಥೋತ್ಸವ ನಡೆಯಲಿದ್ದು ರಥೋತ್ಸವದ ಉಸ್ತುವಾರಿಯನ್ನು ಶಿವಾರ್ಚಕರಾದ ಸಿ.ಪಿ.ರಾಮಣ್ಣ ಮತ್ತು ಸಿ.ಕೆ.ಮಲ್ಲಿಕಾರ್ಜುನ್ ವಹಿಸಲಿದ್ದಾರೆ. ಈ ಮೂರು ಕಾರ್ಯಕ್ರಮಗಳಿಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಥೋತ್ಸವ ಸಮಿತಿಯ ಸಿ.ಬಿ.ಮಲ್ಲಿಕಾರ್ಜುನ್ ಮತ್ತು ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ಕೋರಿದ್ದಾರೆ