Tuesday, April 22, 2025
Google search engine

Homeರಾಜ್ಯಸುದ್ದಿಜಾಲಕುಪ್ಪೆ ಗ್ರಾ.ಪಂ ನೂತನ‌ ಅಧ್ಯಕ್ಷರಾಗಿ ಚುಂಚನಕಟ್ಟೆ ಶಾರದಮ್ಮವೆಂಕಟಪ್ಪ ಅವಿರೋಧ ಆಯ್ಕೆ

ಕುಪ್ಪೆ ಗ್ರಾ.ಪಂ ನೂತನ‌ ಅಧ್ಯಕ್ಷರಾಗಿ ಚುಂಚನಕಟ್ಟೆ ಶಾರದಮ್ಮವೆಂಕಟಪ್ಪ ಅವಿರೋಧ ಆಯ್ಕೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಕುಪ್ಪೆ ಗ್ರಾಮ ಪಂಚಾಯಿತಿಯ ನೂತನ‌ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಚುಂಚನಕಟ್ಟೆ ಶಾರದಮ್ಮವೆಂಕಟಪ್ಪ ಅವಿರೋಧವಾಗಿ‌ ಆಯ್ಕೆಯಾದರು.

ಮಂಗಳವಾರ ಗ್ರಾ.ಪಂ.ಕಚೇರಿಯಲ್ಲಿ‌ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಾರದಮ್ಮ ವೆಂಕಟಪ್ಪ ಅವರನ್ನು ಹೊರತು‌ ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು
ಹಾಲಿ ಅಧ್ಯಕ್ಷರಾಗಿ ಸವಿತಾ ಶ್ರೀನಿವಾಸ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಈ ಚುನಾವಣೆ ನಡೆಯಿತು ಚುನಾವಣಾಧಿಕಾರಿಯಾಗಿ ಪಶುಸಂಗೋಪನೆ ಇಲಾಖೆಯ ಹಿರಿಯ ಸಹಾಯ ನಿರ್ದೇಶಕ ಡಾ.ಮಂಜುನಾಥ್ ಕಾರ್ಯನಿರ್ವಹಿಸಿದರು. ಪಿಡಿಓ ಯೋಗನಂದ್ ಸಹಕಾರ ನೀಡಿದರು.

ನಂತರ ಮಾತನಾಡಿದ ನೂತನ‌ಅಧ್ಯಕ್ಷೆ ಶಾರದಮ್ಮ ವೆಂಕಟಪ್ಪ ತಮ್ಮ ಅವಧಿಯಲ್ಲಿ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಿಗೆ ಅಗತ್ಯ ಮೂಲ ಭೂತ ಸೌಲಭ್ಯ ಒದಗಿಸಿ ಉದ್ಯೋಗ ಖಾತ್ರಿ ಯೋಜನೆಯ ಸಮಪರ್ಕ ಅನುಷ್ಠಾನಕ್ಕೆ ಒತ್ತುನೀಡುವುದಾಗಿ ತಿಳಿಸಿದರು.

ಅಧ್ಯಕ್ಷರ ಅಯ್ಕೆ ಪ್ರಕಟಿಸುತ್ತಿದ್ದಂತೆಯೇ ಜಿಲ್ಲಾ ಜೆಡಿಎಸ್ ಮುಖಂಡ ಸಿ.ಬಿ.ಲೋಕೇಶ್, ಸಾಲಿಗ್ರಾಮ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬೆಣಗನಹಳ್ಳಿ ಪ್ರಶನ್ನ, ಬಿಜೆಪಿ ಅಧ್ಯಕ್ಷ ಹೊಸೂರು ಧರ್ಮ, ಕುಪ್ಪೆ ಗ್ರಾ.ಪಂ. ಮಾಜಿಅಧ್ಯಕ್ಷ ತಿಮ್ಮೇಗೌಡ, ಮಾಜಿ ಉಪಾಧ್ಯಕ್ಷ ನವೀನ್, ಮಾಜಿ ಸದಸ್ಯರಾದ ಸಿ.ಡಿ.ಪ್ರಭಾಕರ್, ನರಸಿಂಹಕಾಮತ್, ಮುಖಂಡ ಡಿ.ಆರ್.ನವೀನ್, ಮಾಸ್ಟರ್ ಹಿರಣ್ಣಯ್ಯ, ಗುರುಕಾರ್ ಮಹೇಶ್, ಯಶೋಧಮಹೇಶ್, ಮತ್ತಿತರು ನೂತನ ಅಧ್ಯಕ್ಷರನ್ನು‌ ಅಭಿನಂಧಿಸಿ ಶುಭಕೋರಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಚುನಾವಣಾ ಸಭೆಯಲ್ಲಿ ಉಪಾಧ್ಯಕ್ಷೆ ಗೀತಾ ಕಾಂತರಾಜು, ಸದಸ್ಯರಾದ ಸಿ.ಬಿ.ಧರ್ಮ, ಗಣೇಶ್,ಗೋವಿಂದೇಗೌಡ, ಗೀತಾ ದಿನೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.

.

RELATED ARTICLES
- Advertisment -
Google search engine

Most Popular