Thursday, July 16, 2026
Google search engine

Homeದೇಶಸಂಭ್ರಮದ ಜಗನ್ನಾಥ ರಥಯಾತ್ರೆ : ದೇಶದ ಗಣ್ಯರಿಂದ ಶುಭಾಶಯಗಳ ಮಹಾಪೂರ

ಸಂಭ್ರಮದ ಜಗನ್ನಾಥ ರಥಯಾತ್ರೆ : ದೇಶದ ಗಣ್ಯರಿಂದ ಶುಭಾಶಯಗಳ ಮಹಾಪೂರ

ನವದೆಹಲಿ : ಇಂದು ವಿಶ್ವವಿಖ್ಯಾತ ಪುರಿ ಶ್ರೀ ಜಗನ್ನಾಥ ಸ್ವಾಮಿಯ ಪವಿತ್ರ ರಥಯಾತ್ರೆಯು ಭಕ್ತಿ-ಭಾವದೊಂದಿಗೆ ಅದ್ಧೂರಿಯಾಗಿ ಆರಂಭಗೊಂಡಿದೆ. ಈ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಹಲವು ಗಣ್ಯರು ದೇಶದ ಜನತೆಗೆ ಶುಭ ಹಾರೈಸಿದ್ದಾರೆ.

ಪ್ರಧಾನಿ ಮೋದಿಯವರ ಸಂದೇಶ

ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶುಭಾಶಯ ಕೋರಿದ್ದು, “ಪವಿತ್ರ ರಥಯಾತ್ರೆಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ಹಾರ್ದಿಕ ಶುಭಾಶಯಗಳು. ಇದು ಭಾರತದ ಶತಮಾನಗಳ ಹಳೆಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಒಂದು ಅನನ್ಯ ಅಭಿವ್ಯಕ್ತಿಯಾಗಿದೆ,” ಎಂದು ಬಣ್ಣಿಸಿದ್ದಾರೆ.

ರಥಯಾತ್ರೆಯು ವಿನಮ್ರತೆ, ಸಾಮೂಹಿಕ ಭಾಗವಹಿಸುವಿಕೆ ಮತ್ತು ನಿಸ್ವಾರ್ಥ ಸೇವೆಯ ಸಂಕೇತವಾಗಿದೆ ಎಂದು ಹೇಳಿದ ಪ್ರಧಾನಿ, ಮಹಾಪ್ರಭು ಜಗನ್ನಾಥನು ಎಲ್ಲರಿಗೂ ಉತ್ತಮ ಆರೋಗ್ಯ, ಸುಖ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಅಲ್ಲದೆ, ಪ್ರಧಾನಿಯವರು ಸಂಸ್ಕೃತದ ಶ್ಲೋಕವೊಂದನ್ನು ಹಂಚಿಕೊಂಡು ಭಗವಂತನಿಗೆ ನಮನ ಸಲ್ಲಿಸಿದ್ದಾರೆ.”ದೇವದೇವ ಜಗನ್ನಾಥ ಸುರಾಸುರನಮಸ್ಕೃತ। ಪುಣ್ಯಶ್ಲೋಕವ್ಯಯಾನಂತ ಪರಮಾತ್ಮನ್ನಮೋಽಸ್ತು ತೆ॥”(ದೇವತೆಗಳಿಗೂ ದೇವನಾದ, ಜಗನ್ನಾಥನಿಗೆ ಸಕಲ ಜೀವರಾಶಿಗಳು ಶ್ರದ್ಧಾಪೂರ್ವಕವಾಗಿ ನಮಿಸುತ್ತವೆ. ಆತನು ಅವಿನಾಶಿ, ಅನಂತ ಮತ್ತು ಎಲ್ಲರ ಹೃದಯದಲ್ಲಿ ನೆಲೆಸಿರುವ ಪರಮಾತ್ಮನಾಗಿದ್ದಾನೆ.)

ಗಣ್ಯರ ಶುಭಹಾರೈಕೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ : “ಶ್ರೀ ಜಗನ್ನಾಥನ ಕೃಪೆಯಿಂದ ನಿಮ್ಮೆಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯ ಸಂಚಾರವಾಗಲಿ. ಜೈ ಜಗನ್ನಾಥ,” ಎಂದು ಶುಭ ಹಾರೈಸಿದ್ದಾರೆ.

ಗೃಹ ಸಚಿವ ಅಮಿತ್ ಶಾ : “ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆಯು ಅಚಲ ನಂಬಿಕೆ, ವಿಶ್ವಾಸ ಮತ್ತು ಭಕ್ತಿಯ ಸಂಕೇತವಾಗಿದೆ. ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಭಗವಾನ್ ಜಗನ್ನಾಥ, ಬಲರಾಮ ಮತ್ತು ಸುಭದ್ರಾ ದೇವಿ ಎಲ್ಲರಿಗೂ ಕಲ್ಯಾಣವನ್ನುಂಟುಮಾಡಲಿ,” ಎಂದು ಹಾರೈಸಿದ್ದಾರೆ.

ಭಾರತದ ಸಾಂಸ್ಕೃತಿಕ ವೈಭವವನ್ನು ಸಾರುವ ಈ ಪವಿತ್ರ ರಥಯಾತ್ರೆಯು ದೇಶಾದ್ಯಂತ ಭಕ್ತರಲ್ಲಿ ಹೊಸ ಹುರುಪು ಮತ್ತು ಆಧ್ಯಾತ್ಮಿಕ ಚೇತನವನ್ನು ತುಂಬಿದೆ.

RELATED ARTICLES
- Advertisment -
Google search engine

Most Popular