Monday, June 15, 2026
Google search engine

Homeಸ್ಥಳೀಯತೆರಿಗೆಗೆ ತಕ್ಕ ಪಾಲು ಕೊಡಿ, ಗ್ಯಾರಂಟಿಗೆ ಹಣ ಬೇಡ : ಗ್ಯಾರಂಟಿ ಯೋಜನೆಗೆ ಕೇಂದ್ರದ ಬಳಿ...

ತೆರಿಗೆಗೆ ತಕ್ಕ ಪಾಲು ಕೊಡಿ, ಗ್ಯಾರಂಟಿಗೆ ಹಣ ಬೇಡ : ಗ್ಯಾರಂಟಿ ಯೋಜನೆಗೆ ಕೇಂದ್ರದ ಬಳಿ ಕೈ ಚಾಚಿಲ್ಲ : ಪ್ರಿಯಾಂಕ್ ಖರ್ಗೆ

ಬೆಂಗಳೂರು :  ಗ್ಯಾರಂಟಿ ಯೋಜನೆಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಗ್ಯಾರಂಟಿಗಳಿಗಾಗಿ ನಾವೇನು ಕೇಂದ್ರದ ಬಳಿ ಕೈ ಚಾಚಿದ್ದೀವಾ? ಗ್ಯಾರಂಟಿಗಳನ್ನ ನಡೆಸಲು ನಿರ್ಮಲಾ ಸೀತಾರಾಮನ್  ಬಳಿ ಕೇಳಿಕೊಂಡಿದ್ದೀವಾ? ಎಂದು ಪ್ರಶ್ನಿಸಿದರು.

ನಾವು ತೆರಿಗೆ ಕಟ್ಟುತ್ತಿದ್ದೇವೆ.  ಅದಕ್ಕೆ ತಕ್ಕಂತೆ ಫಲ ಕೊಡಿ ಅಂತಿದ್ದೀವಿ. ನಾವು ಗ್ಯಾರಂಟಿಗಳಿಗೆ ಕೇಂದ್ರದ ಬಳಿ ದುಡ್ಡು ಕೊಡುತ್ತಿಲ್ಲ.  ಅಷ್ಟು ಮಾತನಾಡೋರು  ಆಂಧ್ರಪ್ರದೇಶದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟರು.

RELATED ARTICLES
- Advertisment -
Google search engine

Most Popular