ಬಾಗಲಕೋಟ: ಬಾಗಲಕೋಟೆ ನವನಗರ ಪತ್ರಿಕಾ ಭವನದಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣವನ್ನು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಆನಂದ ಧಲಬಂಜನ್ ನೆರವೇರಿಸಿದರು.
ರಾಜ್ಯ ಕಾನಿಪ ಕಾರ್ಯಕಾರಿಣಿ ಸದಸ್ಯ ಮಹೇಶ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ಎಸ್. ಕಲ್ಯಾಣಿ, ಕಾರ್ಯದರ್ಶಿ ಗುರುಚಿದಾನಂದ ಹಿರೇಮಠ, ಖಜಾಂಚಿ ಜಗದೀಶ ಗಾಣಿಗೇರ, ಪತ್ರಕರ್ತರಾದ ವಿಠಲ್ ಬಲಕುಂದಿ, ಬಸವರಾಜ ಹವಾಲ್ದಾರ, ಅಭಿಷೇಕ ಪಾಟೀಲ, ವಿರೇಶ ಹಿರೇಮಠ, ಪರಸು ಪೇಟಕರ, ಮುಜಾಪರ ಶಾಲಗಾರ, ವಿರೇಶ ನಾಲತ್ತವಾಡ, ಕಿರಣ್ ನಾರಾಯಣಿ, ಸಂಘದ ವ್ಯವಸ್ಥಾಪಕ ಶಿವಾನಂದ ಗಾಣಿಗೇರ,ಶ್ರೀಕಾಂತ ನೀಲನಾಯಕ ಮತ್ತಿತರರು ಉಪಸ್ಥಿತರಿದ್ದರು.