ಹೊಳೆನರಸೀಪುರ: ಪಟ್ಟಣದ ಹೊಳೆನರಸೀಪುರ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಡಾ.ಭಾಗಲಕ್ಷ್ಮಿ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಕಾಲೇಜಿನಲ್ಲಿ ಗಿಡಗಳನ್ನು ನಡೆಸುವುದರ ಮೂಲಕ ವಿಶಿಷ್ಟವಾಗಿ ಪರಿಸರ ದಿನಾಚರಣೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾನೂನು ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಬಗ್ಗೆ ವಿದ್ಯಾರ್ಥಿಗಳಿಂದ ಚಿತ್ರಗಳನ್ನು ಬರೆಯಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರೇಖಾ ಚೌಹಣ್, ರಾಘವೇಂದ್ರ ಚಾರಿ, ಮೊಟವಳ್ಳಿ ಸರ್, ಗ್ರಂಥಾಪಾಲಕಿ ಗೀತಾ, ಅತಿಥಿ ಉಪನ್ಯಾಸಕರಾದ ಮಂಗಳ, ನಾಗಲಕ್ಷ್ಮಿ, ಶ್ರೀಲಕ್ಷ್ಮಿ, ರೇಷ್ಮ, ಶ್ರೀವಾತ್ಸ, ಮಂಜುನಾಥ್, ಅನಿತಾ, ರೆಹಮಾನ್ ಖಾನ್, ಸೇರಿದಂತೆ ಇನ್ನಿತರರು ಹಾಜರಿದ್ದರು.