ಮದ್ದೂರು: ಒಕ್ಕಲಿಗರ ಬಗ್ಗೆ ಪ್ರೋ.ಭಗವಾನ್ ಅವಹೇಳನಕಾರಿ ಹೇಳಿಕೆ ಖಂಡಿಸಿ ಮದ್ದೂರು ಪಟ್ಟಣದ ಟಿಬಿ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದಿಂದ ಪ್ರತಿಭಟನೆ ನಡೆಸಿದರು. ಮೈ-ಬೆಂ ಹೆದ್ದಾರಿ ತಡೆದುಭಗವಾನ್ ಭಾವಚಿತ್ರಕ್ಕೆ ಪ್ರತಿ ಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿದರು. ಈ ಕೂಡಲೇ ಭಗವಾನ್ ರವರನ್ನ ಬಂಧಿಸಬೇಕು. ಭಗವಾನ್ ರವರಿಗೆ ನೀಡಿರುವ ಅಂಗರಕ್ಷಕರನ್ನ ವಾಪಸ್ಸು ಪಡೆಯಿರಿ. ಭಗವಾನ್ ರಂತಹ ಅವಿವೇಕಿಗಳನ್ನ ಬಂಧಿಸಿ ಗಡಿಪಾರು ಮಾಡಬೇಕು. ಒಕ್ಕಲಿಗ ಸಮುದಾಯದ ಜನಾಂಗಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಎಲ್ಲಾ ಒಕ್ಕಲಿಗ ನಾಯಕರು ಒಗ್ಗೂಟಿ ಧ್ವನಿ ಆಗಬೇಕು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಅಧಿಕಾರ ಸಿಗುವ ಮುಂಚೆ ಜನಾಂಗದ ಬಗ್ಗೆ ತೋರುತ್ತಿದ್ದ ಪ್ರೀತಿ ಅಧಿಕಾರ ಸಿಕ್ಕ ನಂತರ ಇಲ್ಲದಂತಾಗಿದೆ. ಡಿಸಿಎಂ ಡಿಕೆಶಿ ವಿರುದ್ದವು ಪ್ರತಿಭಟನಾಕಾರರು ಅಸಮಾಧಾನ ತಕ್ಷಣವೇ ಭಗವಾನ್ ಬಂಧಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿರು.