Monday, April 21, 2025
Google search engine

Homeಅಪರಾಧಸಾಲಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಸಾಲಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಪಿರಿಯಾಪಟ್ಟಣ: ಸಾಲ ಬಾಧೆಯಿಂದ ಜಿಗುಪ್ಸೆಗೊಂಡು ತಾಲೂಕಿನ ಅಲ್ಪನಾಯಕನಹಳ್ಳಿ ಗ್ರಾಮದ
ರೈತ ಮಂಜುನಾಥ್ (44) ಎಂಬ ರೈತ ವಿಷ ಸೇವಿಸಿ ಅತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ರೈತನಿಗೆ ಅಲ್ಪನಾಯಕನಹಳ್ಳಿ ಹಾಗೂ ಗೊರಹಳ್ಳಿ ಗ್ರಾಮದ ಸರ್ವೆ ನಂಬರ್ 101/2 ಮತ್ತು 99/2 ರಲ್ಲಿ ಒಟ್ಟು 5 ಎಕರೆ ಜಮೀನಿದ್ದು, ಜಮೀನಿನಲ್ಲಿ ತಂಬಾಕು ಬೆಳೆ ಬೆಳೆಯಲಾಗಿದ್ದು, ಈತ ಎಸ್ ಬಿಐ ಸೀಗೂರು ಬ್ಯಾಂಕ್ ನಲ್ಲಿ ರೂ. 12 ಲಕ್ಷ ಹಾಗೂ 6 ಲಕ್ಷ ಕೈ ಸಾಲ ಮಾಡಿದ್ದು, ಅನಾವೃಷ್ಟಿಯಿಂದ ಸಕಾಲಕ್ಕೆ ಮಳೆಯಾಗದೆ ಬೆಳೆ ಸರಿಯಾದ ಪ್ರಮಾಣದಲ್ಲಿ ಬಾರದ ಕಾರಣ ತನ್ನ ಜಮೀನಿನಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರಿಗೆ 4 ಜನ ಹೆಣ್ಣು ಮಕ್ಕಳಿದ್ದು, ಈ ಕುರಿತು ಪತ್ನಿ ಸವಿತಾ ಬೆಟ್ಟದಪುರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

RELATED ARTICLES
- Advertisment -
Google search engine

Most Popular