Tuesday, April 22, 2025
Google search engine

HomeUncategorizedರಾಷ್ಟ್ರೀಯಕಲಾಪಕ್ಕೆ ಅಡ್ಡಿ: ಲೋಕಸಭೆಯಿಂದ ಐವರು ಕಾಂಗ್ರೆಸ್‌ ಸಂಸದರ ಅಮಾನತು

ಕಲಾಪಕ್ಕೆ ಅಡ್ಡಿ: ಲೋಕಸಭೆಯಿಂದ ಐವರು ಕಾಂಗ್ರೆಸ್‌ ಸಂಸದರ ಅಮಾನತು

ನವದೆಹಲಿ: ಕಲಾಪಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್‌ ನ ಐವರು ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಅಮಾನತು ಮಾಡಲಾಗಿದೆ.

ಐವರು ಸಂಸದರನ್ನು ಅಮಾನತು ಮಾಡುವ ನಿರ್ಣಯವನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಂಡಿಸಿದರು. ನಿರ್ಣಯಕ್ಕೆ ಧ್ವನಿಮತದ ಅಂಗೀಕಾರ ಲಭಿಸಿತು.

ಟಿ.ಎನ್ ಪ್ರತಾಪ‍ನ್, ಹೈಬಿ ಈಡನ್, ಜ್ಯೋತಿಮಣಿ, ರಮ್ಯಾ ಹರಿದಾಸ್ ಹಾಗೂ ಡೀನ್ ಕುರಿಯಕೋಸ್ ಅಮಾನತಾದವರು.

ಈ ಪೈಕಿ ಜ್ಯೋತಿಮಣಿ ತಮಿಳುನಾಡಿನವರು. ಉಳಿದವರೆಲ್ಲರೂ ಕೇರಳದ ವಿವಿಧ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಸದನ ಹಾಗೂ ಪೀಠದ ಅಧಿಕಾರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದುದರಿಂದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಅಮಾನತು ಮಾಡಲು ಇವರ ಹೆಸರನ್ನು ಪೀಠವೇ ಸೂಚಿಸಿತ್ತು. ಅಮಾನತು ನಿರ್ಣಯ ಮಂಡಿಸುವಾಗ ಬಿಜೆಡಿ ಸಂಸದ ಬಿ. ಮಹ್ತಾಬ್ ಅವರು ಪೀಠದಲ್ಲಿ ಆಸೀನರಾಗಿದ್ದರು.

RELATED ARTICLES
- Advertisment -
Google search engine

Most Popular