Monday, April 21, 2025
Google search engine

HomeUncategorizedರಾಷ್ಟ್ರೀಯಕಾರುಗಳಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ಪುತ್ರ ಸೇರಿ ಮೂವರ ಬಂಧನ

ಕಾರುಗಳಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ಪುತ್ರ ಸೇರಿ ಮೂವರ ಬಂಧನ

ಬೆಂಗಳೂರು: ಎರಡು ಕಾರುಗಳಲ್ಲಿ ಒಡಿಶಾದಿಂದ ಬೆಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ವೊಬ್ಬರ ಪುತ್ರ ಸೇರಿ ಮೂವರು ಆಂಧ್ರಪ್ರದೇಶದ ಗುಂಟೂರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ವೊಬ್ಬರ ಪುತ್ರ ಅಭಿನವ್‌ (30), ಎಚ್‌ ಎಸ್‌ ಆರ್‌ ಬಡಾವಣೆಯ ನಿವಾಸಿ ಕಿಶೋರ್‌ ಪ್ರಕಾಶ್‌ ರೆಡ್ಡಿ (34), ಸುಮಂತ್‌ ಕುಮಾರ್‌ (24) ಬಂಧಿತರು.

ಬಂಧಿತರಿಂದ 60 ಕೆ.ಜಿ. ಗಾಂಜಾ, 7 ಮೊಬೈಲ್, 2 ಕಾರು, 2.28 ಲಕ್ಷ ರೂ. ಸೇರಿದಂತೆ 44 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಒಡಿಶಾದ ಕೋರಾಪುಟ್‌ ಜಿಲ್ಲೆಯ ಅರಗೊಂಡ ಗ್ರಾಮದಿಂದ ಗಾಂಜಾ ಖರೀದಿಸಿದ್ದರು. ಎರಡು ಕಾರುಗಳಲ್ಲಿ ಒಡಿಶಾದಿಂದ ಬೆಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದರು. ಇತ್ತ ಚುನಾವಣೆ ಹಿನ್ನೆಲೆ ಯಲ್ಲಿ ಆಂಧ್ರದ ಪೊತ್ತೂ ರಿನ ಚೆಕ್‌ ಪೊಸ್ಟ್‌ನಲ್ಲಿ ಪೊಲೀಸರು ವಾಹನ ಗಳ ತಪಾ ಸಣೆ ನಡೆಸುತ್ತಿದ್ದರು. ತಪಾಸಣೆ ವೇಳೆ ಆರೋಪಿಗಳು ಇದೇ ಮಾರ್ಗವಾಗಿ ಬೆಂಗಳೂರಿ ನತ್ತ ಬರುತ್ತಿದ್ದರು. ಇವರ ಕಾರನ್ನು ಪರಿಶೀಲಿಸಿದಾಗ ಗಾಂಜಾ ಪತ್ತೆ ಆಗಿತ್ತು.

ಗುಂಟೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

RELATED ARTICLES
- Advertisment -
Google search engine

Most Popular