ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ತೊಕ್ಕೊಟ್ಟಿನ ಟ್ರಾನ್ಸಿಟ್ ಒನ್ ಮಾಲ್ನಲ್ಲಿ ಬಾಡಿಗೆ, ಲೀಸ್ಗೆ ಅಂಗಡಿ ಮಳಿಗೆಗಳನ್ನು ಪಡೆದಿರುವ ನಮಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿರುವ ವರ್ತಕರು ಈ ಬಗ್ಗೆ ಗ್ರಾಹಕರ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ವಿನೋದ್ ಕುಮಾರ್, ನಾವು ಅಂಗಡಿ ಮಳಿಗೆಗಳನ್ನು ಪಡೆಯುವಾಗ ಫುಡ್ ಕೋರ್ಟ್ಗಳನ್ನು ಮೊದಲ ಮಹಡಿಯಲ್ಲಿ ತೆರೆಯಲು ಅವಕಾಶ ಕೊಡುವುದಾಗಿ ಹೇಳಿದ್ದರು. ಆದರೆ ಫುಡ್ ಕೋರ್ಟ್ಗಳನ್ನು ನೆಲ ಮಹಡಿಯಲ್ಲಿ ತೆರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.
ಇದರಿಂದಾಗಿ ನಮಗೆ ಸಮಸ್ಯೆಯಾಗಿದೆ ಎಂದು ಆರೋಪಿಸಿರುವ ಅವರು, ಕಟ್ಟಡದ ಮಾಲಕರು ಪ್ರಾರಂಭದಲ್ಲಿ ಹೇಳಿದಂತೆ ಸಮಯಕ್ಕೆ ಮಾಲ್ ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರಿಂದ ಅಂಗಡಿ ಹೊಂದಿರುವ ನಾವು ಅಡಕತ್ತರಿಯಲ್ಲಿ ಸಿಕ್ಕಿದಂತಾಗಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಲೆಸ್ಟರ್ ಸಿಕ್ಕೇರಾ, ಅಮಿತ್ ಕುಮಾರ್, ಮುಹಮ್ಮದ್ ಹಾರಿಸ್, ಹೆಲೆನ್ ಗಿಲ್ಬರ್ಟ್ ಕುಟಿನೆ ಮತ್ತಿತರರು ಉಪಸ್ಥಿತರಿದ್ದರು.