ಮೈಸೂರು: ಬಸ್ ಹತ್ತುವಾಗ ಮಹಿಳೆಯ ಕುತ್ತಿಗೆಯಲ್ಲಿದ್ದ ೩೫ ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿರುವ ಘಟನೆ ನಗರದ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ನಡೆದಿದೆ.
ಬನ್ನೂರಿನ ಆಶಾ ಎಂಬುವರು, ಸೀರೆ ಖರೀದಿಗೆ ನಗರದ ಸುಮಂಗಲಿ ಸಿಲ್ಕ್ ಸ್ಯಾರಿ ಸೆಂಟರ್ಗೆ ಬಂದಿದ್ದರು. ಖರೀದಿ ಬಳಿಕ ಆಶಾ ಅವರು ವಾಪಸ್ ಊರಿಗೆ ತೆರಳಲು ಕೇಂದ್ರಿಯ ಬಸ್ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಬಸ್ ಹತ್ತುತ್ತಿದ್ದಾಗ ಕತ್ತಿನಲ್ಲಿದ್ದ ೨.೪೦ ಲಕ್ಷ ಬೆಲೆ ಬಾಳುವ ಚಿನ್ನದ ಸರವನ್ನು ಕಳ್ಳರು ಕಸಿದು ಪರಾರಿಯಾಗಿದ್ದಾರೆ. ಈ ಬಗ್ಗೆ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.