Saturday, April 19, 2025
Google search engine

Homeರಾಜ್ಯಸುದ್ದಿಜಾಲಪಿರಿಯಾಪಟ್ಟಣ:ವಿದ್ಯುತ್ ವಿತರಣಾ ಕೇಂದ್ರಗಳ ಒಂದನೇ ತ್ರೈಮಾಸಿಕ ನಿರ್ವಹಣೆ ಜೂ.16 ರ ಕ್ಕೆ ಮುಂದೂಡಿಕೆ

ಪಿರಿಯಾಪಟ್ಟಣ:ವಿದ್ಯುತ್ ವಿತರಣಾ ಕೇಂದ್ರಗಳ ಒಂದನೇ ತ್ರೈಮಾಸಿಕ ನಿರ್ವಹಣೆ ಜೂ.16 ರ ಕ್ಕೆ ಮುಂದೂಡಿಕೆ

ವರದಿ: ಸತೀಶ್ ಆರಾಧ್ಯ, ಪಿರಿಯಾಪಟ್ಟಣ

ಪಿರಿಯಾಪಟ್ಟಣ: ಜೂ.15 ರಂದು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವ ಕಾರಣ ಅಂದು ನಡೆಯಬೇಕಿದ್ದ ಬೈಲಕುಪ್ಪೆ ಮತ್ತು ಪಿರಿಯಾಪಟ್ಟಣ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳ ಒಂದನೇ ತ್ರೈಮಾಸಿಕ ನಿರ್ವಹಣೆಯನ್ನು ಜೂ.16 ರ ಭಾನುವಾರಕ್ಕೆ ಮುಂದೂಡಲಾಗಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಪಿರಿಯಾಪಟ್ಟಣ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ
ಗುರು ಬಸವರಾಜಸ್ವಾಮಿ ತಿಳಿಸಿದ್ದಾರೆ.

ಜೂ.16 ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪಿರಿಯಾಪಟ್ಟಣ ಟೌನ್, ಮುತ್ತೂರು, ಮಾಲಂಗಿ, ಚೌತಿ, ಚಿಟ್ಟೇನಹಳ್ಳಿ, ಕಂಪಲಾಪುರ, ಕಿರನಲ್ಲಿ, ಪಂಚವಳ್ಳಿ, ದೊಡ್ಡಬೇಲಾಳು, ಬೈಲಕುಪ್ಪೆ, ಚನ್‌ಕಲ್, ಕೊಪ್ಪ, ನವಿಲೂರು, ಹುಣಸವಾಡಿ, ಆವರ್ತಿ, ಪುನಾಡಹಳ್ಳಿ, ಟಿಬೆಟ್ ಕ್ಯಾಂಪ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಳ್ಳಲಿದೆ, ಜೂ.15 ರಂದು ಎಂದಿನಂತೆ ವಿದ್ಯುತ್ ಸರಬರಾಜು ಇರಲಿದ್ದು ಜೂ.16 ರಂದು ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.

RELATED ARTICLES
- Advertisment -
Google search engine

Most Popular