Wednesday, April 16, 2025
Google search engine

Homeರಾಜ್ಯನಂದಿನಿ ಹಾಲಿನ ದರ ಹೆಚ್ಚಳ: ಸಿದ್ದರಾಮಯ್ಯ, ಡಿಕೆಶಿ, ಬಡವರ ರಕ್ತ ಹೀರುತ್ತಿದ್ದಾರೆ: ಆರ್. ಅಶೋಕ್ ಕಿಡಿ

ನಂದಿನಿ ಹಾಲಿನ ದರ ಹೆಚ್ಚಳ: ಸಿದ್ದರಾಮಯ್ಯ, ಡಿಕೆಶಿ, ಬಡವರ ರಕ್ತ ಹೀರುತ್ತಿದ್ದಾರೆ: ಆರ್. ಅಶೋಕ್ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಈಗ ನಂದಿನಿ ಹಾಲಿನ ದರವನ್ನು ಹೆಚ್ಚಿಸಿದೆ. ಕರ್ನಾಟಕ ಹಾಲು ಮಂಡಳಿ ಲೀಟರ್ ಹಾಲಿಗೆ ೨.೧೦ ರೂ ಬೆಲೆ ಹೆಚ್ಚಳ ಮಾಡಿ ಆದೇಶಿಸಿರುವುದು ಈಗ ವಿರೋಧ ಪಕ್ಷದ ಟೀಕೆಗೆ ರಾಜ್ಯ ಸರ್ಕಾರ ಗುರಿಯಾಗಿದೆ.

ಈ ಕುರಿತು ಬೆಳಗಾವಿಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದ್ದು, ಸಿದ್ದರಾಮಯ್ಯ, ಡಿಕೆಶಿ, ಬಡವರ ರಕ್ತ ಹೀರುತ್ತಿದ್ದಾರೆ. ತಿಗಣೆ ರೀತಿಯಲ್ಲಿ ಜನರ ರಕ್ತ ಹೀರುತ್ತಿದ್ದಾರೆ. ಲೋಕ ಚುನಾವಣೆ ಸೋಲಿನ ಕೋಪಕ್ಕೆ ಬೆಲೆ ಏರಿಕೆ ಮಾಡಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಕಬ್ಬಿಣ ಸೇರಿ ಎಲ್ಲದರ ಬೆಲೆ ಏರಿಕೆ ಆಗ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಕಳೆದ ವರ್ಷ ಲೀಟರ್ ಗೆ ೩ ರೂ. ಜಾಸ್ತಿ ಮಾಡಿದ್ರು. ಮುಂದೆ ಬೆಲೆ ಕಡಿಮೆ ಮಾಡೋ ಭರವಸೆ ನೀಡಿದ್ದರು. ಆಧರೆ ಈಗ ಮಾಡಿದ್ದೇನು ಸಿಎಂ ಸಿದ್ದರಾಮಯ್ಯಗೆ ಎಷ್ಟು ನಾಲಿಗೆ ಇದೆ. ಕಾಫಿ, ಟೀ ಕುಡಿಯಲು ಕಲ್ಲು ಹಾಕಿದ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular