Sunday, April 20, 2025
Google search engine

Homeಅಪರಾಧಅಬಕಾರಿ ನೀತಿ ಪ್ರಕರಣ: ಕವಿತಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಅಬಕಾರಿ ನೀತಿ ಪ್ರಕರಣ: ಕವಿತಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಸಿಬಿಐ ಮತ್ತು ಇಡಿ ಪ್ರಕರಣಗಳಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ.ಕವಿತಾ ಸಲ್ಲಿಸಿದ್ದ ಜಾಮೀನು ಅರ್ಜಿಗಳ ಕುರಿತು ದೆಹಲಿ ಹೈಕೋರ್ಟ್ ನಾಳೆ ಜುಲೈ ೧, ೨೦೨೪ ರಂದು ತೀರ್ಪು ನೀಡಲಿದೆ.

ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರ ನ್ಯಾಯಪೀಠವು ಎಲ್ಲಾ ಕಡೆಯ ಸಲ್ಲಿಕೆಗಳನ್ನು ಆಲಿಸಿದ ನಂತರ, ಮೇ ೨೮, ೨೦೨೪ ರಂದು ಈ ವಿಷಯದಲ್ಲಿ ಆದೇಶವನ್ನು ಕಾಯ್ದಿರಿಸಲು ನಿರ್ಧರಿಸಿತು.

ಕವಿತಾ ಪರ ಹಿರಿಯ ವಕೀಲ ವಿಕ್ರಮ್ ಚೌಧರಿ ಮತ್ತು ನಿತೇಶ್ ರಾಣಾ ವಾದ ಮಂಡಿಸಿದ್ದರು. ಕವಿತಾ ಪರವಾಗಿ ವಕೀಲರಾದ ಮೋಹಿತ್ ರಾವ್ ಮತ್ತು ದೀಪಕ್ ನಗರ್ ಕೂಡ ಹಾಜರಾಗಿದ್ದರು. ಸಿಬಿಐ ಪರವಾಗಿ ವಕೀಲ ಡಿ.ಪಿ.ಸಿಂಗ್ ಮತ್ತು ಜಾರಿ ನಿರ್ದೇಶನಾಲಯದ ಪರವಾಗಿ ವಕೀಲ ಜೊಹೆಬ್ ಹುಸೇನ್ ಹಾಜರಾಗಿದ್ದರು.

RELATED ARTICLES
- Advertisment -
Google search engine

Most Popular