ಮೈಸೂರು: ಭಾರತದ ಪ್ರಮುಖ ಅಗರಬತ್ತಿ ತಯಾರಕ ಸೈಕರ್ಪ್ಯೂರ್, ಕೆರಿಬಿಯನ್ ನಾಡಿನಲ್ಲಿ ನಡೆಯುವ ಭಾರತ ಮತ್ತು ವೆಸ್ಟ್ಇಂಡೀಸ್ ನಡುವಿನ ಮೂರು ಟೆಸ್ಟ್ ಸರಣಿಗೆ ಶೀರ್ಷಿಕೆ ಪ್ರಾಯೋಜಕರಾಗಿದೆ. ಉಭಯ ದೇಶಗಳ ನಡುವಿನ ಫ್ರಾಂಕ್ ವೊರೆಲ್ ಟ್ರೋಫಿಗಾಗಿ ಸಾಂಪ್ರದಾಯಿಕವಾಗಿ ಸೆಣೆಸುತ್ತಿದ್ದು, ೨೦೨೩ರ ಸರಣಿಯನ್ನು ಸೈಕರ್ ಪ್ಯೂರ್ಅಗರಬತ್ತಿ ಟೆಸ್ಟಸರಣಿ ಎಂದು ಕರೆಯಲಾಗುತ್ತದೆ. ಟ್ರಿನಿಡಾಡ್ನ ಹೆಸರಾಂತ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಜು.೨೦ ರಿಂದ ಜು.೨೪ ರವರೆಗೆ ನಡೆಯಲಿರುವ ಎರಡನೇ ಟೆಸ್ಟಪಂದ್ಯವು ಉಭಯ ರಾಷ್ಟ್ರಗಳ ನಡುವಿನ ೧೦೦ನೇ ಪಂದ್ಯವಾಗಿರುವುದರಿಂದ ಈ ಸರಣಿಯು ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
೧೯೪೮ರಲ್ಲಿ ದೆಹಲಿಯಲ್ಲಿ ಎರಡೂ ದೇಶಗಳು ಮೊದಲ ಟೆಸ್ಟ್ ಪಂದ್ಯ ಆಡಿದ್ದವು. ಈ ಸರಣಿಯು ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಐದು ಟ್ವೆಂಟಿ-೨೦ ಪಂದ್ಯಗಳನ್ನು ಒಳಗೊಂಡಿರುತ್ತದೆ. ಜು.೧೨ ರಂದು ಡೊಮಿನಿಕಾದ ವಿಂಡ್ಸ ಪಾರ್ಕನಲ್ಲಿ ಟೆಸ್ಟಪಂದ್ಯದೊಂದಿಗೆ ಪ್ರವಾಸ ಸರಣಿ ಪ್ರಾರಂಭವಾಗುತ್ತದೆ.
ಭಾರತದಲ್ಲಿ ಕ್ರಿಕೆಟ್ಅನ್ನು ಧರ್ಮವಾಗಿ ಕಾಣುತ್ತಾರೆ. ಪ್ರಾರ್ಥನೆಯದ್ಯೋತಕವಾಗಿ ಹೊತ್ತಿಸುವ ಸೈಕಲ್ ಫ್ಯೂರ್ ಅಗರ್ಬತ್ತಿಯಂತೆಗಡಿ, ಭಾಷೆ, ಸಂಸ್ಕೃತಿ ಎಲ್ಲವನ್ನೂ ಮೀರಿ ಎಲ್ಲರನ್ನೂ ಒಟ್ಟಿಗೆಸೇರಿಸುವ ಕ್ರೀಡೆಯಿದು. ಈ ಪ್ರಾಯೋಜಕತ್ವದ ಮೂಲಕ, ಸೈಕಲ್ ಬ್ರ್ಯಾಂಡ್ ಕೇವಲ ಆಟವನ್ನು ಬೆಂಬಲಿಸುವುದು ಮಾತ್ರವಲ್ಲ, ಭರವಸೆ ಮತ್ತು ಸಕಾರಾತ್ಮಕತೆಯನ್ನು ಹರಡುವ ದೊಡ್ಡ ಉದ್ದೇಶಕ್ಕೆ ಕೊಡುಗೆ ನೀಡುತ್ತದೆ. ಕ್ರಿಕೆಟ್ ನಂತಹ ಆಟ ಸವಾಲಿನ ಸಮಯದಲ್ಲೂ ವ್ಯಕ್ತಿಗಳು, ಸಮುದಾಯಗಳು ಮತ್ತು ರಾಷ್ಟ್ರಗಳನ್ನು ಪ್ರೇರೇಪಿಸುವ ಮತ್ತು ಮೇಲಕ್ಕೆತ್ತುವ ಸಾಮರ್ಥ್ಯವನ್ನು ಹೊಂದಿವೆ ಎಂದು ಸೈಕಲ್ ಪ್ಯೂರ್ ಅಗರಬತ್ತಿ ದೃಢವಾಗಿ ನಂಬುತ್ತದೆ.
ಪಾಲುದಾರಿಕೆಯನ್ನು ಪ್ರಕಟಿಸಿ ಮಾತನಾಡಿದ ಸೈಕಲ್ ಪ್ಯೂರ್ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ರಂಗ, ಸೈಕಲ್ ಪ್ಯೂರ್ನಲ್ಲಿ, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮತ್ತು ಸಬಲೀಕರಣಗೊಳಿಸುವುದು ನಮ್ಮ ಪ್ರಾಥಮಿಕ ಉದ್ದೇಶಗಳಲ್ಲಿ ಒಂದಾಗಿದೆ.
ಪಂದ್ಯದ ಸಮಯದಲ್ಲಿಯೂ ಪ್ರತಿಯೊಬ್ಬರೂ ಪ್ರಾರ್ಥಿಸಲು ಕಾರಣವಿದೆ ಎಂದು ನಾವು ದೃಢವಾಗಿ ನಂಬುತ್ತೇವೆ. ಕ್ರಿಕೆಟ್ ಒಂದು ಏಕೀಕರಣ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ, ಗಡಿಗಳನ್ನು ಮೀರಿ ಜನರನ್ನು ಒಟ್ಟುಗೂಡಿಸುತ್ತದೆ.
ಭಾರತ ಮತ್ತುವೆಸ್ಟ್ಇಂಡೀಸ್ ನಡುವಣ ೨೦೨೩ರಪ್ರವಾಸಕ್ಕೆ ನಮ್ಮ ಶೀರ್ಷಿಕೆ ಪ್ರಾಯೋಜಕತ್ವವನ್ನು ಘೋಷಿಸಲು ಸಂತೋಷವಾಗಿದೆ. ಈ ಪಾಲುದಾರಿಕೆಯು ಏಕತೆಯ ಮೌಲ್ಯಗಳನ್ನು ಪ್ರಚಾರ ಮಾಡಲು ನಮಗೆ ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಶುಭಹಾರೈಸುತ್ತೇನೆ. ಉಭಯ ತಂಡಗಳ ನಡುವಿನ ೧೦೦ ನೇ ಐತಿಹಾಸಿಕ ಪಂದ್ಯವನ್ನು ವೀಕ್ಷಿಸಲು ಕುತೂಹಲ ಭರಿತನಾಗಿದ್ದೇನೆ ಎಂದರು.