Saturday, April 19, 2025
Google search engine

Homeಅಪರಾಧಮಡಿಕೇರಿ: ದೊಣ್ಣೆಯಿಂದ ಹೊಡೆದು ತಾಯಿಯನ್ನು ಕೊಂದ ಮಗ

ಮಡಿಕೇರಿ: ದೊಣ್ಣೆಯಿಂದ ಹೊಡೆದು ತಾಯಿಯನ್ನು ಕೊಂದ ಮಗ

ಮಡಿಕೇರಿ: ಕುಡಿದ ಮತ್ತಿನಲ್ಲಿ ಮಗನೇ ತಾಯಿಯನ್ನು ದೊಣ್ಣೆಯಿಂದ ಹೊಡೆದು ಹತ್ಯೆಮಾಡಿರುವ ಘಟನೆ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಲಲಿತ (45)  ಮೃತ ದುರ್ದೈವಿಯಾಗಿದ್ದು, ರಾಜಶೇಖರ್ (22) ಎಂಬಾತನೇ ಕೊಲೆ ಅರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಶನಿವಾರಸಂತೆ ವ್ಯಾಪ್ತಿಯ ಕೊಡ್ಲಿಪೇಟೆ ಹೋಬಳಿ ಬೇಸ್ಸುರು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕಟ್ಟೆಪುರ ಹಾಡಿನಲ್ಲಿ ಈ ಘಟನೆ ನಡೆದಿದೆ.  ಕಟ್ಟೆಪುರ ಹಾಡಿ ನಿವಾಸಿ ಜೇನು ಕುರುಬರ ರಾಜ ಶೇಖರ್ ಎಂಬಾತ ಬುಧವಾರ ರಾತ್ರಿ ಕುಡಿದು ಬಂದು ತನ್ನ ತಾಯಿಯೊಂದಿಗೆ ಗಲಾಟೆ ಮಾಡಿದ್ದಾನೆ.  ನಂತರ ತಾಯಿ ಮಗನ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಈ ಸಂದರ್ಭದಲ್ಲಿ ರಾಜಶೇಖರ್ ದೊಣ್ಣೆಯಿಂದ ತಾಯಿ ಲಲಿತ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ.

ಘಟನಾ ಸ್ಥಳಕ್ಕೆ ಶನಿವಾರಸಂತೆ ವೃತ್ತ ನಿರೀಕ್ಷಕ ಪರಶಿವಮೂರ್ತಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಶನಿವಾರ ಸಂತೆ ಪೊಲೀಸರು ಆರೋಪಿ ರಾಜಶೇಖರ್ ನನ್ನು ಬಂಧಿಸಿ , ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular