ಮೈಸೂರು: ಕೇಂದ್ರ ಸರ್ಕಾರದ ಸ್ವಚ್ಛ ಭಾರತದ ಕ್ವಾಲಿಟಿ ಕಂಟ್ರೋಲ್ ಆಫ್ ಇಂಡಿಯಾ ವತಿಯಿಂದ ಲಲಿತ್ ಕುಮಾರ್ ರವರು ನವದೆಹಲಿಯಿಂದ ಆಗಮಿಸಿ ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಬಯಲು ಶೌಚ ಮುಕ್ತ ಪ್ರದೇಶದ ಜಾಗೃತಿ ಹಾಗೂ ಸಂದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ಗಣೇಶ್, ಕಾರ್ಯದರ್ಶಿ ನಾಗಭೂಷಣ ಆಚಾರ್, ನಿರ್ದೇಶಕರಾದ ಮಹೇಶಪ್ಪ, ಖಜಾಂಚಿ ನಾಗರಾಜ್, ಪುನೀತ್, ಜಯಶ್ರೀ , ವೀಣಾ, ಸರಸ್ವತಿ, ಉಮಾ ಹಾಗೂ ನೀತು ಹಾಜರಿದ್ದರು.