Saturday, April 19, 2025
Google search engine

Homeರಾಜ್ಯತುಮಕೂರು: ಪಂಪ್ ಹೌಸ್ ನಲ್ಲಿ ಅಡಗಿಕೊಂಡಿದ್ದ ಚಿರತೆ ರಕ್ಷಣೆ

ತುಮಕೂರು: ಪಂಪ್ ಹೌಸ್ ನಲ್ಲಿ ಅಡಗಿಕೊಂಡಿದ್ದ ಚಿರತೆ ರಕ್ಷಣೆ

ತುಮಕೂರು: ಪಂಪ್‌ ಹೌಸ್ ನಲ್ಲಿ ಅಡಗಿಕೊಂಡಿದ್ದ ಚಿರತೆಯನ್ನು ಕಾಲು ಮುಟ್ಟಿ ಸ್ವಲ್ಪದರಲ್ಲೇ ರೈತನೋರ್ವ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ಕ್ಯಾಮಸಂದ್ರ ಗ್ರಾಮದಲ್ಲಿ ನಡೆದಿದೆ.

ಜಯರಾಮ್ ಪ್ರಾಣಾಪಾದಿಂದ ಪಾರಾದ ರೈತ.

ಎಂದಿನಂತೆ ತನ್ನ ತೋಟದ ಪಂಪ್ ಹೌಸ್ ಒಳಗೆ ತೆರಳಿದ್ದ ರೈತ ಜಯರಾಮ್, ಕತ್ತಲಲ್ಲಿ ಚಿರತೆಯ ಕಾಲು ಮುಟ್ಟಿ ಅನುಮಾನಗೊಂಡು ಪಕ್ಕದ ತೋಟದವರನ್ನು ಕರೆತಂದು ತೋರಿಸಿದ್ದರು.

ಚಿರತೆ ಎಂದು ಸ್ಪಷ್ಟವಾಗುತ್ತಿದ್ದಂತೆ ಪಂಪ್ ಹೌಸ್ ಬಾಗಿಲು ಹಾಕಿ ಅರಣ್ಯಾಧಿಕಾರಿಗಳಿಗೆ ರೈತರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಪಂಪ್ ಹೌಸ್ ಸುತ್ತ ಬಲೆ ಬಿಟ್ಟು ಚಿರತೆ ರಕ್ಷಣೆ ಮಾಡಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular