ಚಾಮರಾಜನಗರ: ವಿಶ್ವದ ಪ್ರಥಮ ವಚನಕಾರರಾದ ದೇವರ ದಾಸಿಮಯ್ಯನವರ ವಚನಗಳು ಮಾನವನ ಅಂತರಂಗವನ್ನು ಅರ್ಥ ಮಾಡಿಕೊಂಡು ಪಾವನ ವಾಗುವ ಸಾಹಿತ್ಯವನ್ನು ನೀಡಿದ ಮಹಾನ್ ವಚನಕಾರರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ,ಸಂಸ್ಕೃತಿ ಚಿಂತಕರು ಆದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ದೇವರ ದಾಸಿಮಯ್ಯನವರು ಜನಪದ ಕಾಳಜಿವುಳ್ಳ ಶ್ರೇಷ್ಠ ವಚನಕಾರರು.ಮನುಕುಲವೇ ಗೌರವಿಸುವ ವಸ್ತ್ರ ನಿರ್ಮಿಸುವ ಕಾಯಕವನ್ನು ಮಾಡುವ ಮೂಲಕ ವಿಶ್ವದ ಮಾನವರು ಗೌರವದಿಂದ ಬದುಕುವ ರೀತಿಯ ಕೌಶಲ್ಯವನ್ನು ನಿರ್ಮಿಸಿದ ದೇವರ ದಾಸಿಮಯ್ಯನವರ ಕೊಡುಗೆ ಮರೆಯಲಾಗದು. ಇಡೀ ವಿಶ್ವವೇ ದೇವರ ದಾಸಿಮಯ್ಯನವರ ಕೊಡುಗೆಗಳನ್ನು ಚಿಂತಿಸುವ ಸಂಶೋಧಿಸುವ ಕಾರ್ಯದಲ್ಲಿ ತೊಡಗಿದೆ. ಸುಮಾರು 176 ವಚನಗಳು ದೊರೆತಿದ್ದು ಮತ್ತಷ್ಟು ಸಂಶೋಧನೆಗಳ ಅಗತ್ಯವಿದೆ. 11ನೇ ಶತಮಾನದಲ್ಲಿ ವಿಶೇಷವಾಗಿ ರಚಿಸಿದವರು. ಕಾಯಕ ನಿಷ್ಠೆಯನ್ನು ಬೋಧಿಸುವ ಮೂಲಕ ಮಾನವನ ದೈಹಿಕ ಮತ್ತು ಮಾನಸಿಕ ಶ್ರಮ ಸಮಾಜಕ್ಕೆ ಅರ್ಪಿತವಾಗಬೇಕು ಎಂಬುದನ್ನು ತಿಳಿಸಿದ ಮಹಾನ್ ವ್ಯಕ್ತಿ ಎಂದು ತಿಳಿಸಿದರು.
ಉದ್ಘಾಟನೆಯನ್ನು ಶಿಕ್ಷಕರಾದ ಕೃಷ್ಣ ಮತ್ತು ನಟರಾಜ್ ರವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ದೇವಾಂಗ ಸಮಾಜದ ವೆಂಕಟಯ್ಯನ ಛತ್ರದ ವೆಂಕಟೇಶ್, ಪತ್ರಕರ್ತ ಚಂದ್ರಶೇಖರ್, ರಾಮಸಮುದ್ರದ ಕುಮಾರ್, ನಟರಾಜ್ ,ಅನಂತ್, ಉಮೇಶ್, ಶ್ರೀಧರ್ ,ಬಾಬು, ಮುರಳಿ, ರಾಜೇಶ, ನಾಗೇಂದ್ರ ಮುರಳಿ ಕೃಷ್ಣ ಗೋಪಾಲಕೃಷ್ಣ, ಮಧು ,ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ, ಪದ್ಮ ಪುರುಷೋತ್ತಮ್ ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

ಕುಮಾರಿ ಆದ್ಯ ರವರನ್ನು ಇದೇ ಸಂದರ್ಭದಲ್ಲಿ ಪುಸ್ತಕ ನೀಡಿ ಗೌರವಿಸಲಾಯಿತು.