Friday, April 24, 2026
Google search engine

Homeಅಪರಾಧಕಾನೂನುಬಿಜೆಪಿ ಮುಖಂಡನ ಪುತ್ರನ ಅತ್ಯಾಚಾರ ಆರೋಪ ಪ್ರಕರಣ : ಸಂತ್ರಸ್ತೆ, ಮಗುವಿಗೆ ಮಾಸಿಕ ₹75 ಸಾವಿರ...

ಬಿಜೆಪಿ ಮುಖಂಡನ ಪುತ್ರನ ಅತ್ಯಾಚಾರ ಆರೋಪ ಪ್ರಕರಣ : ಸಂತ್ರಸ್ತೆ, ಮಗುವಿಗೆ ಮಾಸಿಕ ₹75 ಸಾವಿರ ನೀಡಲು ಹೈಕೋರ್ಟ್‌ ಸೂಚನೆ

ಮಂಗಳೂರು : ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಗೆ ಪ್ರತಿ ತಿಂಗಳು 75 ಸಾವಿರ ರೂ. ಜೀವನಾಂಶ ನೀಡಲು ಹೈಕೋರ್ಟ್‌ ಆದೇಶ ಹೊರಡಿಸಿದೆ.

ಪುತ್ತೂರಿನ ಬಿಜೆಪಿ ‌ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ. ರಾವ್ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿತ್ತು. ಮದುವೆ ಭರವಸೆ ನೀಡಿ ಯುವತಿಯನ್ನು ಆರೋಪಿ ವಂಚಿಸಿದ್ದ. ಯುವತಿ ಗರ್ಭಿಣಿಯಾದ ಬಳಿಕ ಕೃಷ್ಣ ಜೆ. ರಾವ್ ಕೈಕೊಟ್ಟಿದ್ದ. ಯುವತಿ ಮಗುವಿಗೆ ಜನ್ಮ ನೀಡಿದರೂ ಮದುವೆಯಾಗಲು ನಿರಾಕರಿಸಿದ್ದ.

ಬಳಿಕ‌ ಬಂಧನಕ್ಕೊಳಗಾಗಿ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಕ್ರಿಮಿನಲ್ ಪ್ರಕರಣಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸಂತ್ರಸ್ತೆ ಹಾಗೂ ಮಗುವಿಗೆ ತಿಂಗಳಿಗೆ 75,000 ರೂಪಾಯಿ ಜೀವನಾಂಶ ನೀಡಲು ಕೋರ್ಟ್‌ ಆದೇಶ ಹೊರಡಿಸಿದೆ.

ಒಂದು ವಾರದೊಳಗೆ ಮೊದಲ ಕಂತು ಪಾವತಿಸಲು ಕೋರ್ಟ್‌ ಸೂಚನೆ ನೀಡಿದೆ. ಮುಂದಿನ ಎಲ್ಲಾ ನ್ಯಾಯಾಂಗ ಪ್ರಕ್ರಿಯೆಗಳಿಗೆ ತಾತ್ಕಾಲಿಕ ತಡೆ ನೀಡಲಾಗಿದೆ. ನ್ಯಾಯಮೂರ್ತಿ ನಾಗಪ್ರಸನ್ನರ ಏಕಸದಸ್ಯ ಪೀಠದಿಂದ ಆದೇಶ ಹೊರಬಿದ್ದಿದೆ. 

RELATED ARTICLES
- Advertisment -
Google search engine

Most Popular