Thursday, June 4, 2026
Google search engine

Homeರಾಜ್ಯಫ್ರೀ ಪಾಸ್ ಜೊತೆಗೆ ಬಸ್‌ಗಳನ್ನೂ ನೀಡಿ : ಮೊದಲು ಕೆಎಸ್‌ಆರ್‌ಟಿಸಿಗೆ ಶಕ್ತಿ ನೀಡಿ : ಸಿ.ಟಿ...

ಫ್ರೀ ಪಾಸ್ ಜೊತೆಗೆ ಬಸ್‌ಗಳನ್ನೂ ನೀಡಿ : ಮೊದಲು ಕೆಎಸ್‌ಆರ್‌ಟಿಸಿಗೆ ಶಕ್ತಿ ನೀಡಿ : ಸಿ.ಟಿ ರವಿ

ಚಿಕ್ಕಮಗಳೂರು :  ರಾಜ್ಯದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ  ಸಿಎಂ ಡಿಕೆ ಶಿವಕುಮಾರ್ ಉಚಿತ ಬಸ್ ಪಾಸ್ ಘೋಷಣೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಸಿ.ಟಿ ರವಿ, ಫ್ರೀ ಬಸ್ ಪಾಸ್ ಜತೆಗೆ ಬಸ್ ಗಳನ್ನೂ ನೀಡಿ.  ಸಾರಿಗೆ ಬಸ್ ಗಳನ್ನ ತಳ್ಳುವ ಪರಿಸ್ಥಿತಿ ಬಂದಿದೆ. ಮೊದಲು ಕೆಎಸ್ ಆರ್ ಟಿಸಿಗೆ ಶಕ್ತಿ ಕೊಡಬೇಕು ಎಂದು ಸಲಹೆ ನೀಡಿದ್ದಾರೆ.

ಡಿಕೆ ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನಿನ್ನೆ ಪ್ರಮಾಣ ವಚನ ಸ್ವೀಕಾರ ಬೆನ್ನಲ್ಲೆ ಸಚಿವ ಸಂಪುಟ ಸಭೆ ಮಾಡಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿದ್ದರು.

RELATED ARTICLES
- Advertisment -
Google search engine

Most Popular