ಗದಗ : ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರಕ್ಕೆ ಸ್ಪರ್ಧಿಸೋ ವಿಚಾರ ಗದಗನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ ನಾನು ಆಕಾಂಕ್ಷಿ ಅಲ್ಲ ಅಂತ ಈಗಾಗಲೇ ಉತ್ತರ ನೀಡಿದ್ದೇನೆ. ಯಾವ ಕ್ಷೇತ್ರದ ಬಗ್ಗೆಯೂ ಚರ್ಚೆ ಆಗಿಲ್ಲ…ಯಾವ ಸೂಚನೆಯೂ ಆಗಿಲ್ಲ… ಅವೆಲ್ಲ ಊಹಾಪೋಹಾಗಳು ಎಂದರು. ತಮಿಳನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ ಸರ್ವಪಕ್ಷಗಳ ಸಭೆಯಲ್ಲಿ ನೀರು ಬಿಡುವದಿಲ್ಲ ಅನ್ನೋ ನಿರ್ಣಯದ ವಿಚಾರ ಈಗಾಗಲೇ ಸಾಕಷ್ಟು ನೀರನ್ನ ಹರಿಸಿದ್ದಾರೆ.ಡ್ಯಾಂ ನಲ್ಲಿ ನೀರು ಇಲ್ಲದಂತೆ ಮಾಡಿ ಇಟ್ಟಿದ್ದಾರೆ. ಹತ್ತಸಾವಿರ ಕ್ಯೂಸೆಕ್ ಹದಿನೈದು ದಿವಸ ಹಾಗೂ ಐದುಸಾವಿರ ಕ್ಯೂಸೆಕ್ಸ್ ಹದಿನೈದು ದಿವಸ ನೀರು ಹರಿಸಿದ್ದಾರೆ. ಹೀಗಾಗಿ ಕುಡಿಯೋಕು ಸಹ ನೀರು ಇಲ್ಲದ ಪರಿಸ್ಥಿತಿ ಇದ್ದು, ನೀರು ಬಿಡಬಾರದು ಎಂದು ಹೇಳಿದ್ದೇವೆ.
12 ತಾರೀಖು ನಂತರ ನೀರು ಬೀಡೋಲ್ಲ ಎಂದು ಸುಪ್ರೀಂಕೋರ್ಟಗೆ ಈಗಾಗಲೇ ಅಫಿಡಿವೆಟ್ ಹಾಕಿದ್ದಾರೆ. ಸರ್ಕಾರ ಇದಕ್ಕೆ ಬದ್ಧರಾಗಿರಬೇಕು ಎಂದು ಹೇಳಿದ್ದೇನೆ. ಸರ್ವಪಕ್ಷಸಭೆಯಲ್ಲಿ ಆ ರೀತಿಯ ತೀರ್ಮಾನ ಮಾಡಿದ್ದರೆ ನಾವೂ ಸಹ ಸರ್ಕಾರದ ಜೊತೆ ಗಟ್ಟಿಯಾಗಿ ನಿಲ್ಲುತ್ತೇವೆ. ಅಕಸ್ಮಾತ್ ನೀರು ಬಿಟ್ಟಿದ್ದೇ ನಿಜವಾದರೆ. ಕಾವೇರಿ ಜಲಾನಯನ ಪ್ರದೇಶದ ರೈತರು ಹಾಗೂ ಜನರಿಗೆ ಸರ್ಕಾರ ದೊಡ್ಡ ಅನ್ಯಾಯ ಮಾಡಿದಂತಾಗುತ್ತೆ ಎಂದರು. ಚೈತ್ರಾ ಕುಂದಾಪುರ ಕೋಟ್ಯಾಂತರ ರೂ ಹಗರಣ ವಿಚಾರ ಅವರು ಯಾರ್ಯಾರಿಗೋ ಏನೇನು ಹೇಳಿದ್ದಾರೆ ಅನ್ನೋದು ಮಾಹಿತಿ ಇಲ್ಲ. ಆದರೆ ಯಾರೇ ಇರಲಿ..ತನಿಖೆ ಆಗಲಿ..ಸತ್ಯಾಸತ್ಯತೆ ಹೊರಗೆ ಬರಲಿ ಎಂದು ಹೇಳಿದರು.