ಗದಗ: ಒಣಗಿದ ಬೆಳೆಯಿಂದಾಗಿ ಸಾಲ ತೀರಿಸಲಾಗದೇ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ನಡೆದಿದೆ.
ನೀಲಪ್ಪ ಗೊರವರ್ (38) ಆತ್ಮಹತ್ಯೆಗೆ ಶರಣಾದ ರೈತ.
ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
9 ಎಕರೆ ಜಮೀನು ಹೊಂದಿದ್ದ ರೈತ, ಮುಸುಕಿನ ಜೋಳ ಬೆಳೆದಿದ್ದ. ಮಳೆ ಬಾರದೆ ಬೆಳೆ ಒಣಗಿದ್ದರಿಂದ ಕಂಗಾಲಾಗಿದ್ದ. ಜೊತೆಗೆ ಕೆವಿಜಿ ಬ್ಯಾಂಕ್ ನಲ್ಲಿ 2 ಲಕ್ಷ ರೂ. ಸಾಲ, ಕೈಗಡ 5 ಲಕ್ಷ ಸಾಲ ಮಾಡಿದ್ದ. ಅತಿಯಾದ ಸಾಲವನ್ನು ತೀರಿಸಲು ಸಾಧ್ಯವಾಗದೇ ರೈತ ಪರದಾಡುತ್ತಿದ್ದನು.
ಇನ್ನೊಂದೆಡೆ ಕೈ ಕೊಟ್ಟ ಮಳೆಯಿಂದ ಬೆಳೆ ನಾಶವಾಗಿದ್ದು, ಇದರಿಂದ ಮನನೊಂದು ರೈತ ಆತ್ಮಹತ್ಯೆ ಗೆ ಶರಣಾಗಿದ್ದಾನೆ.
ಸ್ಥಳಕ್ಕೆ ಶಿರಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.