Monday, April 21, 2025
Google search engine

Homeಅಪರಾಧಜೆಸಿಬಿ- ಬೈಕ್ ನಡುವೆ ಢಿಕ್ಕಿ: ಬೈಕ್ ಸವಾರ, ಅದೃಷ್ಟವಶಾತ್ ಮಗು ಪಾರು

ಜೆಸಿಬಿ- ಬೈಕ್ ನಡುವೆ ಢಿಕ್ಕಿ: ಬೈಕ್ ಸವಾರ, ಅದೃಷ್ಟವಶಾತ್ ಮಗು ಪಾರು

ಮಂಡ್ಯ: ಜೆಸಿಬಿ ಹಾಗೂ ಬೈಕ್ ನಡುವೆ ಢಿಕ್ಕಿ ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿದ್ದು, ಎರಡೂ ವರ್ಷದ ಮಗು ಪಾರಾಗಿರುವ ಘಟನೆ ಹಲಗೂರು ಸಮೀಪದ ಮಳವಳ್ಳಿ ತಾಲ್ಲೂಕಿನ ಹೆಚ್.ಬಸಾಪುರ ಗ್ರಾಮದ ಬಳಿ ನಡೆದಿದೆ.

ಕುಲುಮೆದೊಡ್ಡಿ ಗ್ರಾಮದ ನಿಂಗರಾಜು(35) ಮೃತ ವ್ಯಕ್ತಿ.

ಮೃತ ವ್ಯಕ್ತಿಯ ಶವವನ್ನು ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

ಗ್ರಾಮಕ್ಕೆ ತೆರಳುವ ವೇಳೆ ಬೈಕ್-ಜೆಸಿಬಿ ನಡುವೆ ಡಿಕ್ಕಿಯಾಗಿ ಮಳವಳ್ಳಿ-ಕನಕಪುರ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ.

ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular