Sunday, April 20, 2025
Google search engine

Homeಅಪರಾಧಮಂಗಳೂರು: ಮಂಗಳಾ ಕ್ರೀಡಾಂಗಣದ ಈಜುಕೊಳದಲ್ಲಿ ಈಜುತ್ತಿದ್ದ ಯುವಕ ಸಾವು

ಮಂಗಳೂರು: ಮಂಗಳಾ ಕ್ರೀಡಾಂಗಣದ ಈಜುಕೊಳದಲ್ಲಿ ಈಜುತ್ತಿದ್ದ ಯುವಕ ಸಾವು

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ನಗರದ ಮಂಗಳಾ ಕ್ರೀಡಾಂಗಣದ ಈಜುಕೊಳದಲ್ಲಿ ಈಜಾಡುತ್ತಿದ್ದ ಹರ್ಯಾಣ ಮೂಲದ ಅಭಿಷೇಕ್ ಆನಂದ್ (30) ಎಂಬ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಸಂಜೆ  ಇಲ್ಲಿನ ಈಜುಕೊಳದಲ್ಲಿ ಸಾರ್ವಜನಿಕರಿಗೆ ಈಜಲು ಪ್ರವೇಶವಿದೆ.  ಅಭಿಷೇಕ್ ಟಿಕೆಟ್ ಪಡೆದುಕೊಂಡು ಈಜುಕೊಳಕ್ಕೆ ಇಳಿದಿದ್ದ. ಇದೇ ವೇಳೆ ನೀರಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ. ಈ ವೇಳೆ ಸುಮಾರು 30ಕ್ಕೂ ಅಧಿಕ ಮಂದಿ ಈಜಾಡುತ್ತಿದ್ದರೂ ಯಾರಿಗೂ ಅಭಿಷೇಕ್ ಮುಳುಗಿದ್ದು ಅರಿವಿಗೆ ಬರಲಿಲ್ಲ ಎಂದು ಹೇಳಲಾಗುತ್ತಿದೆ.

ಹುಡುಗನೊಬ್ಬ ಈಜಾಡುತ್ತಾ ಹೋಗುತ್ತಿದ್ದಾಗ ನೀರಿನಡಿ ದೇಹವೊಂದು ಕಾಣಸಿಕ್ಕಿದ್ದು ತಕ್ಷಣ ಆತ ಲೈಫ್‌ ಗಾರ್ಡ್‌ ಗಳಿಗೆ ಮಾಹಿತಿ ನೀಡಿದ. ಈ ವೇಳೆ ಈಜುಕೊಳದಲ್ಲಿ ಕಾರ್ಯನಿರತರಾಗಿದ್ದ ಲೈಫ್‌ ಗಾರ್ಡ್‌ ಗಳು ಈಜುಕೊಳಕ್ಕೆ ಹಾರಿ ಅಭಿಷೇಕ್‌ ನನ್ನು ಮೇಲಕ್ಕೆತ್ತಿದರೂ ಪ್ರಯೋಜನವಾಗಲಿಲ್ಲ.

ಅಭಿಷೇಕ್‌ ನ ಬಾಯಿ ಮೂಲಕ ಕೃತಕ ಉಸಿರಾಟ ನೀಡಿದ್ದಾರೆ. ಆದರೆ ಅಭಿಷೇಕ್‌ ನಿಂದ ಯಾವುದೇ ಸ್ಪಂದನೆ ಸಿಗದ ಕಾರಣ ತಕ್ಷಣ ನಗರದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಅಭಿಷೇಕ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

RELATED ARTICLES
- Advertisment -
Google search engine

Most Popular