Saturday, April 19, 2025
Google search engine

Homeರಾಜ್ಯಸುದ್ದಿಜಾಲಮೂಲ ಸಂಸ್ಕೃತಿಯನ್ನು ಉಳಿಸುವಲ್ಲಿ ಗಿರಿಜನರ ಪಾತ್ರ ಮಹತ್ವದ್ದು: ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ

ಮೂಲ ಸಂಸ್ಕೃತಿಯನ್ನು ಉಳಿಸುವಲ್ಲಿ ಗಿರಿಜನರ ಪಾತ್ರ ಮಹತ್ವದ್ದು: ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ

ಮೈಸೂರು: ಹಿಂದಿನಿoದಲೂ ತಮ್ಮ ಕಲೆ, ಆಚರಣೆಯನ್ನು ಉಳಿಸಿಕೊಂಡು ಬಂದಿರುವರ ಗಿರಿಜನರು ಮೂಲ ಸಂಸ್ಕೃತಿಯನ್ನು ಇಂದಿಗೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನಸ್ವಾಮಿ ಅವರು ತಿಳಿಸಿದರು.

ಇಂದು ನಗರ ಕರ್ನಾಟಕ ಕಲಾ ಮಂದಿರ ಅವರದಲ್ಲಿನ ಕಿರುರಂಗಮoದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗಿರಿಜನ ಉಪಯೋಜನೆಯಡಿ ಹಮ್ಮಿಕೊಂಡಿದ್ದ, ಗಿರಿಜನ ಉತ್ಸವ-೨೦೨೩ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಾಂಸ್ಕೃತಿಕ ಕಲೆಗಳನ್ನು, ಮೂಲ ಸಂಸ್ಕೃತಿಯನ್ನು ನಾವು ಕಾಪಾಡಿಕೊಂಡು ಹೋಗಬೇಕು. ಕರ್ನಾಟಕದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಸ್ಕೃತಿ ಆಚರಣೆಗಳು ಇದ್ದವು. ಅಂದಿನ ಕಲೆಗಳು ನಶಿಸಿ ಹೋಗಿದೆ. ಅದರಲ್ಲಿ ಅಪರೂಪವಾಗಿ ಕಂಡುಬರುವ ಕಲೆಗಳಲ್ಲಿ ಗಿರಿಜನರ ಕಲೆಗಳು ಅತ್ಯಂತ ಹಳೆಯ ಕಲೆಗಳಾಗಿವೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಇಲಾಖೆಯ ವತಿಯಿಂದ ಸಂಸ್ಕೃತಿಯನ್ನು ಸಾರುವ ವಿವಿಧ ಕಾರ್ಯಕ್ರಮಗಳನ್ನು ವರ್ಷವಿಡೀ ಆಯೋಜಿಸಿ ಜನರಿಗೆ ಸಂಸ್ಕೃತಿ, ಸಾಹಿತ್ಯ, ಪರಂಪರೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಳೆದ ೬೦ ವರ್ಷಗಳಿಂದ ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಕನ್ನಡ ನಾಡು ನುಡಿಯನ್ನು ಸದಾ ಜಾಗೃತವಾಗಿಸುವ ಹಾಗೂ ಎಲ್ಲಾ ಕಲೆಗಳನ್ನು ಸಂರಕ್ಷಿಸುವ, ಪ್ರೋತ್ಸಾಹಿಸಿ ಬೆಳೆಸುವ ದಿಕ್ಕಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಮೈಸೂರು ದಸರಾ, ಹಂಪಿ ಉತ್ಸವ, ಚಾಲುಕ್ಯ ಉತ್ಸವ, ಲಕ್ಕುಂಡಿ ಉತ್ಸವ, ನವರಸಪುರ ಉತ್ಸವ, ಆನೆಗುಂದಿ ಉತ್ಸವ, ಬನವಾಸಿ ಉತ್ಸವ ಹಾಗೂ ವಿವಿಧ ಜಲೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಸಣ್ಣ ಸಣ್ಣ ಸಮುದಾಯಗಳಲ್ಲಿ ಇವರು ಮೂಲ ಕಲೆಯನ್ನು ಗುರುತಿಸಿ, ನಾಶವಾಗದಂತೆ ಅವುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಈ ನಿಟ್ಟಿನಲ್ಲಿ ಮೂಡಿ ಬಂದಿರುವ ಉತ್ಸವಗಳೇ ಜನಪರ, ಬುಡಕಟ್ಟು ಉತ್ಸವ ಹಾಗೂ ಗಿರಿಜನ ಉತ್ಸವಗಳಾಗಿವೆ. ಗಿರಿಜನರು ತಮ್ಮ ಮೂಲವಾಸದಿಂದಲೂ ಆಚರಿಸಿಕೊಂಡು ಬಂದಿರುವ ವಿವಿಧ ಕಲಾಶೈಲಿಗಳನ್ನು ತಲೆಮಾರಿನಿಂದ ತಲೆಮಾರಿನವರೆಗೂ ಮುಂದುವರೆಸಿಕೊoಡು ಬಂದಿದ್ದಾರೆ, ಆ ರೀತಿಯ ಕಲೆಗಳನ್ನು ಗುರುತಿಸಿ ಅವುಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ಮುಖ್ಯ ವಾಹಿನಿಗೆ ತರುವ ಕಾರ್ಯಕ್ರಮಗಳನ್ನು ಸರ್ಕಾರ ಮತ್ತು ಇಲಾಖೆಯಿಂದ ನಡೆಸಲಾಗುತ್ತಿದೆ ಎಂದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಜಾನಪದ ಕಲಾ ತಂಡಗಳಿಗೆ ಶಾಸಕರಾದ ಹರೀಶ್ ಗೌಡ ಅವರು ಚಾಲನೆಯನ್ನು ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಕರಾದ ಎಂ.ಡಿ ಸುದರ್ಶನ್ ಅವರು ಮಾತನಾಡಿ ಪ್ರಮುಖವಾಗಿ ಈ ಕಾರ್ಯಕ್ರಮವು ಗಿರಿಜನರ ಕಲೆಗಳ ಪ್ರದರ್ಶನಕ್ಕೆ ನಡೆಸಲಾದ ಕಾರ್ಯಕ್ರಮವಾಗಿದ್ದು ಸಂಪೂರ್ಣ ಕಲಾವಿದರು ಪರಿಶಿಷ್ಟ ಪಂಡಗಕ್ಕೆ ಸೇರಿದ ಕಲಾವಿದರು, ಹಾಗೂ ಈ ಕಾರ್ಯಕ್ರಮದಡಿ ಗಿರಿಜನರ ಕಲೆಗಳಿಗೆ ಹೆಚ್ಚಿನ ಪ್ರೋತ್ಸವವನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ದೊಡ್ಡ ಮಾರನಹಳ್ಳಿಯ ಡಿ.ಕೆ ಲೋಕೇಶ್ ಮತ್ತು ತಂಡದಿoದ ಸುಗಮ ಸಂಗೀತ, ಎಚ್.ಡಿ.ಕೋಟೆಯ ಜವರ ನಾಯಕ ತಂಡದಿಂದ ಜಾನಪದ ಗೀತೆ, ರಾಜೇಶ್ವರಿ ಮತ್ತು ತಂಡದಿoದ ಭಕ್ತಿ ಸಂಗೀತ, ನಂಜನಗೂಡು ಕಳಲೆ ಗ್ರಾಮದ ದೇವಣ್ಣ.ಪಿ ಮತ್ತು ತಂಡದಿoದ ತತ್ವಪದ, ರಮ್ಯ ಮತ್ತು ತಂಡದವರಿoದ ಡೊಳ್ಳು ಕುಣಿತ, ಎಚ್.ಡಿ.ಕೋಟೆಯ ಚಲ್ಲನ್ ಮತ್ತು ತಂಡದಿoದ ಬೆಟ್ಟ ಕುರುಬ ಸಾಂಪ್ರದಾಯಿಕ ನೃತ್ಯ, ನಾಣಚ್ಚಿಗದ್ದೆ ಹಾಡಿಯ ರಮೇಶ್ ಮತ್ತು ತಂಡದಿoದ ಅಡಲೇಮರ ನೃತ್ಯ, ತಲಕಾಡಿನ ರಾಜಶೇಖರ್ ಮತ್ತು ತಂಡದಿoದ ಚಿಲಿಪಿಲಿ ಗೊಂಬೆ ನೃತ್ಯ, ನಂಜನಗೂಡು ಕಳಲೆ ಗ್ರಾಮದ ಪ್ರತಾಪ್.ಆರ್ ಮತ್ತು ತಂಡದಿoದ ಕೊಂಬು ಕಹಳೆ, ಹೆಚ್.ಡಿ. ಕೋಟೆಯ ಪೆಂಜಳ್ಳಿ ಕಾಲೋನಿಯ ರಮೇಶ್ ಮತ್ತು ತಂಡದಿoದ ಕರಡಿ ಕುಣಿತ, ಯಲ್ಲಾಪುರದ ಲಿಲ್ಲಿ ಮತ್ತು ತಂಡದ ವತಿಯಿಂದ ಡಮಾಮಿ ನೃತ್ಯವನ್ನು ಆಯೋಜಿಸಲಾಗಿತ್ತು.

RELATED ARTICLES
- Advertisment -
Google search engine

Most Popular