ಮೈಸೂರು : ಕರ್ನಾಟಕ ವೈದ್ಯಕೀಯ ಪರಿಷತ್ ನ (ಕೆಎಂಸಿ) ಅಧ್ಯಕ್ಷರಾದ ಡಾಕ್ಟರ್ ವೈ ಸಿ ಯೋಗಾನಂದ ರೆಡ್ಡಿ ಚುನಾಯಿತರಾಗಿದ್ದಾರೆ. ಉಪಾಧ್ಯಕ್ಷರಾಗಿ ಜೆ ಎಸ್ ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ರಿಸರ್ಚ್ ಸರ್ಜಿಕಲ್ ಪ್ರೊಫೆಸರ್ ಹಾಗೂ HOD ಡಾ. ಕೆ. ರವಿ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.
2023-2029 ಅವಧಿಯ ಪದಾಧಿಕಾರಿಗಳ ಆಯ್ಕೆಗಾಗಿ ಜುಲೈ 2 ರಂದು ಚುನಾವಣೆ ನಡೆದಿದ್ದು, ಈಗಾಗಲೇ
ಡಾಕ್ಟರ್ ಶಿವಾನಂದ್ ಭೀಮಳಿ, ಡಾಕ್ಟರ್ ಸಂತೋಷ್ ಡಿ ಪಾಟೀಲ್, ಡಾಕ್ಟರ್ ಚೈತ್ರ ವಿ ಆನಂದ್,ಡಾ. ಭರತ್ ಕುಮಾರ್, ರವರನ್ನು ರಾಜ್ಯ ಸರ್ಕಾರ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ.