ಪೌರ ಕಾರ್ಮಿಕರು ಮತ್ತು ಶ್ರಮಿಕ ವರ್ಗದವರನ್ನು ಸನ್ಮಾನಿಸುವ ಮೂಲಕ ವಿಶಿಷ್ಟವಾಗಿ ಆಚರಣೆ
ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪಟ್ಟಣದ ಸಹವರ್ತಿ ಮಧಾರಿಯಾದ ಧರ್ಮಗುರು ಅಪ್ಸರ್ ಮುನಾವರ್ ಆಲಿಷಾ ಖಾದ್ರಿ (ಮುನಾವರ್ ಪಾಷಾ) ಇವರ ಹುಟ್ಟು ಹಬ್ಬವನ್ನು ಪೌರ ಕಾರ್ಮಿಕರು ಮತ್ತು ಶ್ರಮಿಕ ವರ್ಗದವರನ್ನು ಸನ್ಮಾನಿಸುವ ಮೂಲಕ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.
ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ ವಿವಿಧ ಧರ್ಮಗುರುಗಳ ಸಾನಿಧ್ಯದಲ್ಲಿ ನಡೆದ ಜನ್ಮ ದಿನಾಚರಣೆ ಸಮಾರಂಭದಲ್ಲಿ ಸುಮಾರು ೩೫೦ಕ್ಕೂ ಹೆಚ್ಚು ಶ್ರಮಿಕ ವರ್ಗದವರನ್ನು ಗೌರವಿಸಲಾಯಿತ್ತಲ್ಲದೆ ಸಹಪಂಕ್ತಿ ಭೋಜನ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಸಹವರ್ತಿ ಮಧಾರಿಯಾದ ಧರ್ಮಗುರು ಅಪ್ಸರ್ ಮುನಾವರ್ ಆಲಿಷಾ ಖಾದ್ರಿ (ಮುನಾವರ್ ಪಾಷಾ) ಮಾತನಾಡಿ ಸಮಾಜದಲ್ಲಿ ಉಳ್ಳವರು ಮತ್ತು ಹೃದಯವಂತರು ಜನ್ಮ ದಿನ ಆಚರಣೆಯ ನೆಪದಲ್ಲಿ ಅನಗತ್ಯವಾಗಿ ಹಣ ವ್ಯಯ ಮಾಡದೆ ನೊಂದವರು ಮತ್ತು ಕಾಯಕ ಜೀವಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಇತರರಿಗೆ ಮಾದರಿಯಾಬೇಕು ಆ ಪ್ರಯತ್ನವನ್ನು ನಾವು ಮಾಡಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಬಡವರ್ಗದ ಮಹಿಳೆಯರಿಗಾಗಿ ಟೈಲರಿಂಗ್ ತರಬೇತಿ ಕೇಂದ್ರ ತೆರೆಯಲಿದ್ದು ತರಬೇತಿ ಪಡೆದಂತಹಾ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ ಗುರುಗಳು ಪ್ರತಿ ತಿಂಗಳ ಕೊನೆಯ ದಿನ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಔಷಧಿ ಖರೀದಿಸಲು ಹಣ ಇಲ್ಲದಂತಹಾ ಬಡವರನ್ನು ಗುರುತಿಸಿ ಅವರುಗಳಿಗೆ ಒಂದು ತಿಂಗಳಿಗಾಗುವಷ್ಟು ಔಷಧಿ ಮಾತ್ರೆಗಳನ್ನು ಕೊಡಿಸಲಾಗುತ್ತದೆ ಎಂದು ಭರವಸೆ ನೀಡಿದ ಅವರು ನಾವು ಸೇವಾ ಕಾರ್ಯವನ್ನು ಜಾತ್ಯಾತೀತವಾಗಿ ಮತ್ತು ಧರ್ಮಾತೀತವಾಗಿ ಮಾಡುತ್ತಿದ್ದು ಎಲ್ಲರೂ ನನ್ನನ್ನು ನಿಮ್ಮ ಕುಟುಂಬದವನೆAದು ಪರಿಗಣಿಸಿ ಸಹಕಾರ ನೀಡಬೇಕೆಂದು ಕೋರಿದರು.
ಈ ವೇಳೆ ಹಲವು ಮಂದಿ ಯುವಕರು ಮತ್ತು ಧರ್ಮ ಗುರುಗಳ ಭಕ್ತರು ಆಗಮಿಸಿ ಹುಟ್ಟು ಹಬ್ಬಕ್ಕೆ ಶುಭಾಷಯ ಕೋರಿದರು.
ಧರ್ಮ ಗುರುಗಳಾದ ಅಹಮದ್ ಷಾ ಸವೋರ್ದಿ, ಅಸದ್ಬಾವ, ಪುರಸಭೆ ಸದಸ್ಯ ಕೋಳಿಪ್ರಕಾಶ್, ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಲಯನ್ಶಿವರಾಜು, ರಾಜ್ಯ ಯುವಘಟಕದ ಅಧ್ಯಕ್ಷ ರಾಜಿಕ್ಖಾನ್, ಉದ್ಯಮಿ ನರಸಿಂಹಮೂರ್ತಿ, ಡಾ.ದೇವೇಂದ್ರಪ್ಪ, ಮುಜಾಜಿ ಅಹಮ್ಮದ್, ಜಾನಪದ ಪರಿಷತ್ನ ಪದಾಧಿಕಾರಿಗಳಾದ ಸೈಯದ್ರಿಜ್ವಾನ್, ರಾಜಯ್ಯ, ತಿಮ್ಮಶೆಟ್ಟಿ, ವ್ಯಾನ್ಸುರೇಶ್, ಮಂಜುನಾಥ್, ರಾಮಶೆಟ್ಟಿ, ರವಿಕುಮಾರ್, ಶಿವಶಂಕರ್, ಅರ್ಜುನ್ಕುಮಾರ್, ಸಿರಾಜ್ ಮತ್ತಿತರರು ಹಾರಿದ್ದರು.