Saturday, April 19, 2025
Google search engine

Homeಸ್ಥಳೀಯಹುಣಸೂರು ತಾಲ್ಲೂಕಿನ ಹುಸೇನಪುರ ಮತ್ತು ಮನುಗನಹಳ್ಳಿ ಗ್ರಾಮ ಪಂಚಾಯಿತಿಗೆ ಜಿ.ಪಂ ಸಿಇಒ ಭೇಟಿ

ಹುಣಸೂರು ತಾಲ್ಲೂಕಿನ ಹುಸೇನಪುರ ಮತ್ತು ಮನುಗನಹಳ್ಳಿ ಗ್ರಾಮ ಪಂಚಾಯಿತಿಗೆ ಜಿ.ಪಂ ಸಿಇಒ ಭೇಟಿ

ಮೈಸೂರು: ಹುಣಸೂರು ಗ್ರಾಮ ಪಂಚಾಯಿತಿ ಪಕ್ಕದಲ್ಲಿಯೇ ಇರುವ ಅಂಗನವಾಡಿಯಲ್ಲಿರುವ ಶೌಚಾಲಯ ರಿಪೇರಿ, ಪೂರೈಕೆಯಾಗುವ ಆಹಾರದ ಸರಬರಾಜಿನ ಕಡತಗಳ ನಿರ್ವಹಣೆ ಹಾಗೂ ಮಕ್ಕಳಿಗೆ ಹೆಚ್ಚಿನ ಚಟುವಟಿಕೆ ಕೈಗೊಳ್ಳಲು ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಕೆ.ಎಂ. ಗಾಯಿತ್ರಿ ಅವರು ತಾಕೀತು ಮಾಡಿದರು.

ಹುಣಸೂರು ತಾಲ್ಲೂಕಿನ ಹುಸೇನಪುರ ಮತ್ತು ಮನುಗನಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಅಧಿಕಾರಿಯವರು, ಸರ್ಕಾರದಿಂದ ನೀಡಲಾಗುವ ಅನುದಾನದ ಸದ್ಭಳಕೆ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳು, ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.
ಬಳಿಕ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಂಗನವಾಡಿಯ ಶೌಚಾಲಯದ ಅವ್ಯವಸ್ಥೆ, ಆಹಾರ ಪೂರೈಕೆ ಮತ್ತು ಆಹಾರದ ವಿತರಣೆಯ ರಿಜಿಸ್ಟರ್ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ಜೊತೆಗೆ ಕೂಸಿನ ಮನೆಗೂ ಭೇಟಿ ನೀಡಿದ್ದು, ಈ ವೇಳೆ ಕಂಡು ಬಂದಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಪಿಡಿಒ ಅವರಿಗೆ ಸೂಚನೆ ನೀಡಿದರು.

ಇದಕ್ಕೂ ಮುನ್ನಸಭೆಯಲ್ಲಿ ಮ-ನರೇಗಾ ಯೋಜನೆಯಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳ್ಳುವ ಕಾಮಗಾರಿ ಕುರಿತು ಚರ್ಚಿಸಿದ್ದು, ಶೀಘ್ರವೇ ಕ್ರಿಯಾ ಯೋಜನೆಯಲ್ಲಿನ ಕಾಮಗಾರಿಯನ್ನು ಅನುಷ್ಠಾನ ಮಾಡಲು ಹಾಗೂ ಕೆರೆ ಅಭಿವೃದ್ಧಿ, ಬೂದು ನೀರು ನಿರ್ವಹಣಾ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ತಿಳಿಸಿದರು. ಕರ ವಸೂಲಾತಿ, ಗ್ರಂಥಾಲಯ, ಜೆಜೆಂ ಕಾಮಗಾರಿ, ಎನ್.ಆರ್. ಎಲ್. ಎಂ ನಿಂದಾಗುವ ಚಟುವಟಿಕೆ, ಘನ ತ್ಯಾಜ್ಯ ವಿಲೇವಾರಿ ಘಟಕ, ಇ ಸ್ವತ್ತು, ವಸತಿ ಯೋಜನೆ, ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ, ಕುಡಿಯುವ ನೀರು, ಶಾಲಾ ಶೌಚಾಲಯ, ಕೃಷಿ ಅರಣ್ಯೀಕರಣ, ಮೆಡಿಸನ್ ಪ್ಲಾಂಟ್, ಆರೋಗ್ಯ ಕರ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಚರ್ಚೆ ನಡೆಸಿ ಯಾವುದೇ ಲೋಪಗಳು ಉಂಟಾಗದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಜೆಜೆಎಂ ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಹಾಗೂ ಸ್ವತಃ ಮನೆಗಳಿಗೆ ಅಳವಡಿಸಲಾಗಿರುವ ಕಾಮಗಾರಿಯನ್ನು ವೀಕ್ಷಿಸಿ ಮನೆಯ ಮುಖ್ಯಸ್ಥರೊಂದಿಗೆ ಅನಿಸಿಕೆ ಪಡೆದುಕೊಂಡರು. ಬಳಿಕ ಬಿಳಿಕೆರೆ ಗ್ರಾಮ ಪಂಚಾಯಿತಿಯ ಪಟ್ಟಲದಮ್ಮನ ಕೆರೆ ಪ್ರದೇಶಕ್ಕೆ ತೆರಳಿ ಅರಣ್ಯೀಕರಣದ ಮೂಲಕ ಆ ಪ್ರದೇಶವನ್ನು ಅಭಿವೃದ್ಧಿಪಡಿಸುವಂತೆ ಪಿಡಿಒ ಅವರಿಗೆ ತಿಳಿಸಿದರು.

ಈ ವೇಳೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರಾದ ಹೊಂಗಯ್ಯ. ಕೆ, ಪಿ.ಆರ್.ಇ.ಡಿ ಇಲಾಖೆಯ ಜಿಲ್ಲಾ ಕಾರ್ಯನಿರ್ವಾಹಕ ಅಭಿಯಂತರರಾದ ರಂಜಿತ್ ಕುಮಾರ್, ಪಿ.ಆರ್.ಡಬ್ಲ್ಯೂ ಇಲಾಖೆಯ ಮಹಮ್ಮದ್ ಖಲೀಂ, ಎಇಇ ಪುಟ್ಟನಾಗರಾಜು, ಜೆಇ ಸಚಿನ್, ಎಇ ಮಹೇಂದ್ರ, ನರೇಗಾ ಸಹಾಯಕ ನಿರ್ದೇಶಕರಾದ ಗಿರಿಧರ್.ಎಸ್, ಜನನ ಹುಸೇನಪುರ ಗ್ರಾ.ಪಂ. ಅಧ್ಯಕ್ಷರಾದ ಗಾಯಿತ್ರಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಛಾಯಾ, ಸಂತೋಷ್, ತಾಲ್ಲೂಕು ತಾಂತ್ರಿಕ ಸಂಯೋಜಕರು, ನರೇಗಾ ಇಂಜಿನಿಯರ್, ಗ್ರಾಮ ಪಂಚಾಯಿತಿ ಸದಸ್ಯರು, ಕಾರ್ಯದರ್ಶಿ ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular