ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಗ್ರಾಮೀಣ ಭಾಗದಲ್ಲಿ ಇರುವ ಕನ್ನಡದ ಶಾಲೆಗಳ ಏಳಿಗೆಗಾಗಿ ಪೋಷಕರು ಮತ್ತು ಆರ್ಥಿಕವಾಗಿ ಸದೃಡವಾಗಿರುವರು ತಮ್ಮ ಆರ್ಥಿಕ ನೆರವಿನಿಂದ ಶ್ರಮಿಸುವುದು ಅವಶ್ಯಕ ಎಂದು ಮೈಸೂರು ಕನ್ನಡ ಗೆಳೆಯರ ಬಳಗದ ಎಂ.ವಿ.ಅನಿತಾ ಹೇಳಿದರು.
ಕೆ.ಆರ್.ನಗರ ತಾಲೂಕಿನ ಡಿ.ಕೆ.ಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೈಸೂರು ಕನ್ನಡ ಗೆಳೆಯರ ಬಳಗದ ವತಿಯಿಂದ ಸ್ಮಾರ್ಟ್ ಟಿವಿ, ಮಕ್ಕಳಿಗೆ ಬ್ಯಾಗ್, ಲೇಖನ ಸಾಮಗ್ರಿ- ಜಮಖಾನ ಕಲಿಕೋಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು.

ಇತ್ತಿಚ್ಚಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಸಮುದಾಯವು ಕೈಜೋಡಿಸಬೇಕು. ಇಲ್ಲವಾದರೆ ಪೋಷಕರು ತಮ್ಮಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿರುವ ಪರಿಣಾಮವಾಗಿ ಕನ್ನಡ ಶಾಲೆಗಳು ಮುಚ್ಚುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ಬಳಗದ ಪಿ.ಉಮೇಶ್, ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಸೈಂಟ್ ಥಾಮಸ್ ಶಾಲೆಯಲ್ಲಿ 1980ರ ಸಾಲಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳೆಲ್ಲ ಸೇರಿ ಸ್ಥಾಪಿಸಿರುವ ಈ ಸಂಘವು
ಕನ್ನಡ ಶಾಲೆಗಳು ಉಳಿದರೆ ಮಾತ್ರ ನಾಡಿನ ಸಂಸ್ಕೃತಿ, ಕನ್ನಡ ಭಾಷೆ, ಪರಂಪರೆ ಉಳಿಯಲು ಸಾಧ್ಯ ಎಂಬುದನ್ನು ಮನಗೊಂಡು ಪ್ರತಿ ವರ್ಷ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುವ ಮಕ್ಕಳ ಏಳಿಗೆಗೆ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಬೆಂಬಲಿಸುವ ಉದ್ದೇಶವನ್ನು ಹೊಂದಿರುತ್ತದೆ ಎಂದು ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ಬಳಗದ ಸದಸ್ಯರನ್ನು ಶಾಲಾಭಿವೃದ್ದಿ ಸಮಿತಿ ವತಿಯಿಂದ ಆತ್ಮೀಯವಾಗಿ
ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಳದಗದ ಎನ್.ಪದ್ಮರೇಖಾ, ಎನ್.ಎಂ.ಕೋಮಲ, ಎಂ.ಕೆ. ಶರವಣ, ಬಿ.ಎಂ.ಸವಿತಾ, ಸವಿತಾ, ಎಸ್.ಕಸ್ತೂರಿ, ವಿದ್ಯಾಸಾಗರ್, ನಂದೀಶ್, ಹಾಗೂ ಸಿದ್ದಾಪುರ ಗ್ರಾ. ಪಂ. ಪಿಡಿಓ ಗಿರೀಶ್ ಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಡಿ.ಪಿ .ನಾಗೇಂದ್ರ, ಉಪಾಧ್ಯಕ್ಷೆ ಪ್ರಮೀಳಾ, ಸದಸ್ಯರಾದ ಸೌಮ್ಯ, ಅಶ್ವಿನಿ, ಸುಭಾಷಿಣಿ, ಸ್ವಾಮಿ, ಲೀಲಾವತಿ, ಜ್ಯೋತಿ, ಪ್ರತಿಮಾ, ಸಂತೋಷ್, ನಾಗಣ್ಣ, ಶಿಕ್ಷಕರಾದ ಮೇಲೂರು. ಎಂ .ಕೆ.ಕುಮಾರ್, ಎಸ್.ಟಿ.ರಘುವರ, ಕೆ.ಟಿ.ಚಂದನ್, ಸಿ. ಚೈತ್ರ ಸೇರಿದಂತೆ ಮತ್ತಿತರು ಹಾಜರಿದ್ದರು.