ಚಾಮುಂಡಿ ಬೆಟ್ಟದಲ್ಲಿ ಬಿತ್ತಿಪತ್ರ ಇಡಿದು ಭಕ್ತಾದಿಗಳಿಗೆ ಗುಲಾಬಿ ನೀಡಿ ಜಾಗೃತಿ
ಮೈಸೂರು: ಚಾಮುಂಡೇಶ್ವರಿ ಭಕ್ತವೃಂದದಿಂದ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ಚಾಮುಂಡಿ ಬೆಟ್ಟ ಸೇರಿದಂತೆ ಸರ್ಕಾರದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಬಿತ್ತಿ ಪತ್ರ ಪ್ರದರ್ಶಿಸಿ ಭಕ್ತಾದಿಗಳಿಗೆ ಗುಲಾಬಿ ನೀಡಿ ಜಾಗೃತಿ ಮೂಡಿಸಲಾಯಿತು.

ಬಳಿಕ ಮಾತನಾಡಿದ ಚಾಮುಂಡೇಶ್ವರಿ ಭಕ್ತ ವೃಂದದ ಸಂಚಾಲಕ ಆನಂದ್ ಸಾಂಸ್ಕೃತಿಕ ರಾಜಧಾನಿ ಮೈಸೂರು ಎಂದು ಹೆಸರು ಬರಲು ಮೈಸೂರಿಗರ ಸಂಸ್ಕಾರ ಸಂಸ್ಕೃತಯೇ ಕಾರಣ, ಪಾವಿತ್ರ್ಯತೆ ಪ್ರಾಚೀನವಾದ ಧಾರ್ಮಿಕ ಕ್ಷೇತ್ರ ಚಾಮುಂಡಿ ಬೆಟ್ಟದ ದೇವಸ್ಥಾನಕ್ಕೆ ಆಷಾಡ ಅಂಗವಾಗಿ ಬರುವವರು ನಮ್ಮ ಸಾಂಸ್ಕೃತಿಕ ಉಡುಪನ್ನ ಧರಿಸಿ ಬರುವಲ್ಲಿ ಬರಬೇಕು, ಸರ್ಕಾರ ವಸ್ತ್ರನೀತಿ ಸಂಹಿತೆ ತರದಿದ್ದರೂ ಪರವಾಗಿಲ್ಲ ನಮ್ಮ ಸಂಸ್ಕೃತಿಯನ್ನ ಪಾಲಿಸುವುದು ನಮ್ಮ ಕರ್ತವ್ಯ, ತಿರುಪತಿ ವೇಂಕಟೇಶ್ವರ ಸನ್ನಿಧಿ, ಕೇರಳದ ಶಿವನ ದೇವಸ್ಥಾನಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಕೋಟ್ಯಾಂತರ ಭಕ್ತರು ವಸ್ತ್ರಸಂಹಿತೆ ಪಾಲಿಸಿ ಬಂದಿಲ್ಲವೇ? ನಮ್ಮ ಮೈಸೂರಿನ ಸಾಂಸ್ಕೃತಿಕತೆ ಪಾರಂಪರಿಕತೆಯನ್ನ ಉಳಿಸಿ ಪಾಲಿಸುವಲ್ಲಿ ಯುವ ಪೀಳಿಗೆ ಮುಂದಾಗಲಿ ಎಂದು ಮನವಿ ಮಾಡಿದರು.
ಮಹೇಶ್, ಶೃತಿ, ಶ್ವೇತ, ಕಿರಣ್, ಬಸವರಾಜು, ಮಣಿ, ಸೌಮ್ಯ. ಚಂದ್ರು, ಶೇಖರ್, ಕಲ್ಪನ, ತಾಯಮ್ಮ, ಸರೋಜ ಜಲದಾಕ್ಷಿ ಹಾಗೂ ಇನ್ನಿತರರು ಹಾಜರಿದ್ದರು.