Saturday, June 28, 2025
Google search engine

Homeರಾಜ್ಯಸುದ್ದಿಜಾಲಕೆಂಪೇಗೌಡರು ಅನಿಷ್ಠ ಪದ್ದತಿಗಳನ್ನು ದೂರ ಮಾಡಿದ್ದು ಸ್ಮರಣೀಯ: ನಿವೃತ್ತ ಉಪನ್ಯಾಸಕ ಜವರೇಗೌಡ

ಕೆಂಪೇಗೌಡರು ಅನಿಷ್ಠ ಪದ್ದತಿಗಳನ್ನು ದೂರ ಮಾಡಿದ್ದು ಸ್ಮರಣೀಯ: ನಿವೃತ್ತ ಉಪನ್ಯಾಸಕ ಜವರೇಗೌಡ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : 16 ನೇ ಶತಮಾತನದಲ್ಲಿ ಕೆಲವು ಧರ್ಮಗಳಲ್ಲಿ ಮಹಿಳೆಯರ ಮೇಲೆ ಇದ್ದ ಕೆಲವು ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಲು ನಾಡಪ್ರಭು ಕೆಂಪೇಗೌಡರು ಶ್ರಮಿಸಿದ್ದರು ಎಂದು ನಿವೃತ್ತ ಉಪನ್ಯಾಸಕ ಕುಪ್ಪೆ ಎ.ಜವರೇಗೌಡ ಹೇಳಿದರು.

ಸಾಲಿಗ್ರಾಮ ತಾಲೂಕಿನ ಕುಪ್ಪೆ ಗ್ರಾಮದಲ್ಲಿ ನಡೆದ 516ನೇ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದ ಅವರು ಕೆಂಪೇಗೌಡರ ದೂರದೃಷ್ಠಿ ಮತ್ತು ಕೌಶಲ್ಯ ದಿಂದಾಗಿ ಬೆಂಗಳೂರು ನಗರ ಭಾರತ ದೇಶದ ಪ್ರಮುಖ ನಗರವಾಗಿ ಮಾರ್ಪಡಲು ಸಾಧ್ಯವಾಯಿತು ಎಂದರು.

ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸುವಲ್ಲಿ ಕೆಂಪೇಗೌಡರು ಪ್ರಮುಖ ಪಾತ್ರ ವಹಿಸಿದ್ದರು. ಅಂದು ಅವರು ನಿರ್ಮಿಸಿದ ಬೆಂಗಳೂರು ನಗರ ಇಂದು ಬೃಹದಾಕಾರವಾಗಿ ಬೆಳೆದು ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ ಎಂದರು.

ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾತ್ರವಲ್ಲದೇ ಬೆಂಗಳೂರನ್ನು ಸುಸ್ಥಿರ, ವಾಣಿಜ್ಯ ಲಾಭದಾಯಕ, ಜನವಸತಿಗೆ ಯೋಗ್ಯ, ಕಲೆ-ಸಂಸ್ಕೃತಿಗಳ ತಾಣವಾಗಿ ಬೆಳೆಸುವ ಬಗ್ಗೆ ಕೆಂಪೇಗೌಡರಿಗೆ ಸ್ಪಷ್ಟ ಕಲ್ಪನೆಯಿತ್ತು ಇಲ್ಲಿರುವ ಕೆರೆಗಳ ಜಾಲ, ನೀರು ಹರಿಯಲು ಮಾಡಿದ್ದ ರಾಜಕಾಲುವೆ, ಸುಂಕದಕಟ್ಟೆಗಳು, ನಗರದ ಮಿತಿ ಗುರುತಿಸಿದ್ದ ಗಡಿ ಗೋಪುರಗಳು ಅವರ ದೂರದೃಷ್ಟಿ ಆಡಳಿತಕ್ಕೆ ಸಾಕ್ಷಿ ಆಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತೃಶ್ರೀ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕುಪ್ಪೆ ಮಂಜುನಾಥ್, ಕುಪ್ಪೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್, ನಿವೃತ್ತ ಶಿಕ್ಷಕ ಹಿರಣ್ಣಯ್ಯ, ಗ್ರಾಮಸ್ಥರಾದ ರಾಘವೇಂದ್ರ, ಚಂದ್ರಪ್ಪ, ದೇವರಾಜ್, ಪರಶಿವಮೂರ್ತಿ, ಮಂದಣ್ಣ, ಪ್ರತಾಪ್, ಚಂದ್ರಹಾಸ, ನಾಗರಾಜ್, ಮಾಜಿ ನಂದೀಶ್, ಶ್ರೀನಿವಾಸ್, ಪ್ರೇಮ್ ಜಿ, ಕುಳ್ಳಮಂಜಣ್ಣ ,ಕಾಂತರಾಜ್, ಮಾಯಣ್ಣ, ಕೃಷ್ಣೇಗೌಡ, ಡೈರಿನಾಗಣ್ಣ, ನಟರಾಜ್, ನಾಮಕುಮಾರ್, ರಮೇಶ್, ಚೆಲುವ, ಚನ್ನೇಗೌಡ, ಗಗನ್, ಸಹಕಾರ ಸಂಘದ ಗುಮಾಸ್ತ ಜಗನ್ನಾಥ್,ಪ್ರಗತಿಪರ ರೈತ ಸತ್ಯಪ್ಪ ಇದ್ದರು.

RELATED ARTICLES
- Advertisment -
Google search engine

Most Popular