Friday, February 6, 2026
Google search engine

HomeUncategorizedರಾಷ್ಟ್ರೀಯಸನಾತನ ಧರ್ಮವನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ : ಪುಷ್ಕರ್‌ ಸಿಂಗ್‌ ಧಾಮಿ

ಸನಾತನ ಧರ್ಮವನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ : ಪುಷ್ಕರ್‌ ಸಿಂಗ್‌ ಧಾಮಿ

ಡೆಹ್ರಾಡೂನ್‌ : ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಸನಾತನ ಧರ್ಮವು ಶಾಶ್ವತ ತತ್ವಗಳನ್ನು ಆಧರಿಸಿದೆ ಮತ್ತು ಅದನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹರಿದ್ವಾರದಲ್ಲಿ ನಡೆದ ಸಂತರ ಸಭೆಯಲ್ಲಿ ಮಾತನಾಡಿದ ಅವರು, ಸನಾತನ ಧರ್ಮವು ಮಾನವ ನಿರ್ಮಿತವಲ್ಲ, ಆದರೆ ಶಾಶ್ವತ ತತ್ವಗಳನ್ನು ಆಧರಿಸಿದೆ. ಅದನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ ಎಂದರಲ್ಲದೆ, ಗಂಗಾನದಿಯ ದಡದಲ್ಲಿ ನೆರೆದಿದ್ದ ಎಲ್ಲಾ ಸಂತರು, ಧಾರ್ಮಿಕ ಮುಖಂಡರು ಮತ್ತು ಭಕ್ತರು ಸನಾತನ ಪ್ರಜ್ಞೆಯ ಜೀವಂತ ಸಂಕೇತಗಳೆಂದು ಅವರು ಬಣ್ಣಿಸಿದರು ಮತ್ತು ಅವರೆಲ್ಲರೂ ರಾಷ್ಟ್ರ ಮತ್ತು ಅದರ ಸಂಸ್ಕೃತಿಗೆ ಅಮೂಲ್ಯ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದರು.

ಮುಂದುವರೆದು, ರಾಷ್ಟ್ರೀಯ ಕರ್ತವ್ಯ, ಸೇವೆ, ತ್ಯಾಗ ಮತ್ತು ಕರುಣೆಗೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಮಹಾನ್‌ ವ್ಯಕ್ತಿಗಳು ಕೇವಲ ತಪಸ್ವಿಗಳಲ್ಲ, ಆದರೆ ರಾಷ್ಟ್ರೀಯ ಪ್ರಜ್ಞೆಗೆ ಸಂಬಂಧಿಸಿದ ದೈವಿಕ ಸಂತರು ಎಂದು ಧಾಮಿ ಹೇಳಿದರು. ಸಂತ ಸಂಪ್ರದಾಯವು ಯಾವುದೇ ಒಂದು ಪಂಥ ಅಥವಾ ಸಮುದಾಯಕ್ಕೆ ಸೀಮಿತವಾಗಿಲ್ಲ, ಆದರೆ ಇಡೀ ಜಗತ್ತನ್ನು ವಸುದೈವ ಕುಟುಂಬಕಂ (ಜಗತ್ತು ಒಂದು ಕುಟುಂಬ) ಚೈತನ್ಯದೊಂದಿಗೆ ಸಂಪರ್ಕಿಸಲು ಕೆಲಸ ಮಾಡುತ್ತದೆ ಎಂದರು.

ಇನ್ನೂ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಸಾಂಸ್ಕೃತಿಕ ಪುನರುಜ್ಜೀವನದ ಹೊಸ ಯುಗ ಆರಂಭವಾಗಿದೆ ಮತ್ತು ರಾಮ ಮಂದಿರ ನಿರ್ಮಾಣ ಮತ್ತು ಬದರಿನಾಥ ಧಾಮ್‌ ಮಾಸ್ಟರ್‌ ಪ್ಲಾನ್‌ನಂತಹ ಯೋಜನೆಗಳು ಭಾರತವನ್ನು ವಿಶ್ವ ನಾಯಕನನ್ನಾಗಿ ಮರುಸ್ಥಾಪಿಸುವ ಪ್ರಮುಖ ಹೆಜ್ಜೆಗಳಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರು, ಹರಿದ್ವಾರದ ಗಂಗಾನದಿಯ ದಡದಲ್ಲಿರುವ ಭಾರತ ಮಾತಾ ದೇವಾಲಯವು ದೇಶದ ಸಾಂಸ್ಕೃತಿಕ ಪ್ರಜ್ಞೆಯ ಸಂಕೇತವಾಗಿದೆ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ಸಂತ ಸಮುದಾಯವು ಭಾರತೀಯ ಸಂಸ್ಕೃತಿಯನ್ನು ಬಲಪಡಿಸಲು ಮತ್ತು ದೇಶವನ್ನು ಒಂದುಗೂಡಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಿಹಾರ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರು ಸಂತರ ಸಹವಾಸವನ್ನು ಜೀವನದ ದುಃಖಗಳಿಗೆ ಪರಿಹಾರವೆಂದು ಬಣ್ಣಿಸಿದರು ಮತ್ತು ಭಾರತದ ಗುರುತು ಅದರ ಶಾಶ್ವತ ಸಂಸ್ಕೃತಿಯಲ್ಲಿ ಬೇರೂರಿದೆ ಎಂದು ಹೇಳಿದರು. ಶಂಕರಾಚಾರ್ಯ ರಾಜರಾಜೇಶ್ವರ ಶ್ರಮ ಮಹಾರಾಜ್‌ ಮತ್ತು ಯೋಗ ಗುರು ಸ್ವಾಮಿ ರಾಮದೇವ್‌ ಕೂಡ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular