Saturday, May 9, 2026
Google search engine

Homeರಾಜಕೀಯತಮಿಳುನಾಡು ಸರ್ಕಾರ ರಚನೆ ಕಗ್ಗಂಟು ಸುಪ್ರೀಂ ಅಂಗಳಕ್ಕೆ

ತಮಿಳುನಾಡು ಸರ್ಕಾರ ರಚನೆ ಕಗ್ಗಂಟು ಸುಪ್ರೀಂ ಅಂಗಳಕ್ಕೆ

ನವದೆಹಲಿ :  ತಮಿಳುನಾಡಿನಲ್ಲಿ ಸರ್ಕಾರ ರಚನೆ ಕಗ್ಗಂಟು ವಿಚಾರ ಇದೀಗ ಸುಪ್ರೀಂಕೋರ್ಟ್ ಅಂಗಳಕ್ಕೆ ತಲುಪಿದೆ. ಸರ್ಕಾರ ರಚನೆಗೆ ರಾಜ್ಯಪಾಲರು ಕೂಡಲೇ ಬಹುಮತ ಪಡೆದಿರುವ ಟಿವಿಕೆ ಮುಖ್ಯಸ್ಥ ವಿಜಯ್ ರನ್ನು ಆಹ್ವಾನಿಸಬೇಕು ಎಂದು ಮನವಿ ಮಾಡಿ ಸುಪ್ರೀಂಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ.

ಮಾಜಿ ಐಜಿ ರಾಮಸುಬ್ರಮಣಿ ಎಂಬುವವರು ಸುಪ್ರೀಂಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಟಿವಿಕೆಯನ್ನು ಅತ್ಯಂತ ದೊಡ್ಡ ಪಕ್ಷವಾಗಿ ಪರಿಗಣಿಲು ಮನವಿ ಮಾಡಲಾಗಿದೆ.  ರಾಜ್ಯಪಾಲರು ಕೂಡಲೇ ವಿಜಯ್ ರನ್ನು ಸರ್ಕಾರ ರಚನೆಗೆ ಆಹ್ವಾನಿಸಬೇಕು.  ಸಂವಿಧಾನ ಬದ್ದವಾಗಿ ಅತಿದೊಡ್ಡ ಪಕ್ಷಕ್ಕೆ ಮೊದಲ ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಬಹುಮತ ಸಾಬೀತಿಗೆ ಸದನವೇ ವೇದಿಕೆಯಾಗಲಿ. 108 ಸ್ಥಾನ ಗೆದ್ದಿರುವ ಟಿವಿಕೆಗೆ ಕಾಂಗ್ರೆಸ್ ಬೆಂಬಲವಿದೆ ಬಹುಮತಕ್ಕೆ 5 ಸ್ಥಾನದ ಕೊರತೆಯಿದ್ದರೂ ರಾಜ್ಯಪಾಲರು ಆಹ್ವಾನ ನೀಡಿಲ್ಲ. ಸುಪ್ರೀಂಕೋರ್ಟ್  ಆದೇಶದ ಮೂಲಕ ವಿಜಯ್ ಅವರಿಗೆ ಸರ್ಕಾರ ರಚಿಸಲು ಆಹ್ವಾನಿಸುವಂತೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular